Wednesday 16 January 2019

ಸುಭಾಷಿತ  -೩


ಯಥಾ ಹ್ಯೇಕೇನ ಚಕ್ರೇಣ  ನ ರಥಸ್ಯ ಗತಿರ್ಭವತಿ।
ತಥೈವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ।।

ಪದಚ್ಛೇದ:
ಯಥಾ ಹಿ ಏಕೇನ ಚಕ್ರೇಣ ನ ರಥಸ್ಯ ಗತಿಃ ಭವತಿ।
ತಥಾ ಏವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ ।।

ಅನ್ವಯ ಅರ್ಥ:

ಯಥಾ(ಹೇಗೆ)
 ಏಕೇನ ಚಕ್ರೇಣ(ಒಂದೇ ಚಕ್ರದಿಂದ)
 ರಥಸ್ಯ ಗತಿಃ(ರಥದ ಚಲನೆಯು)
ನ ಹಿ ಭವತಿ(ಆಗಗುವುದಿಲ್ಲವೋ)
ತಥಾ ಏವ(ಹಾಗೆಯೇ)
 ದೈವಂ ವಿನಾ(ದೈವವಿಲ್ಲದೆ)
 (ಕೇವಲಂ) ಪುರುಷಯತ್ನೇನ (ಕೇವಲ ಪುರುಷಪ್ರಯತ್ನದಿಂದ)
 (ಕಾರ್ಯಂ)  ನ ಸಿಧ್ಯತಿ(ಕಾರ್ಯಸಿದ್ಧಿ ಆಗಲಾರದು) ।।

ಭಾವಾರ್ಥ:

ರಥ ನಡೆಯಬೇಕಾದರೆ ಎರಡು ಚಕ್ರಗಳು ಬೇಕೇ ಬೇಕು. ಎರಡೂ ಚಕ್ರಗಳೂ ಅನುನಯಿಸಿ ಹೋಗಬೇಕು.
ಸಂಕಲ್ಪಿತ ಕಾರ್ಯಸಿದ್ಧಿಗೆ ಒಂದು ಚಕ್ರ ಪುರುಷಪ್ರಯತ್ನವಾದರೆ ಇನ್ನೊಂದು ಚಕ್ರ ದೈವಸಹಾಯ. ಯಾವ ನಾಸ್ತಿಕನಾದರೂ ಅವನು ಕೇಳಿದರೂ ಕೇಳದ್ದರೂ ದೈವಸಹಾಯ ಇಲ್ಲದಿದ್ದರೆ ಕಾರ್ಯಪೂರ್ತಿ ಆಗಲಾರದು.
ಹಾಗೇ
ಎಷ್ಟೇ ದೊಡ್ಡ ಭಕ್ತನಾದರೂ ಏನೂ ಪ್ರಯತ್ನ ಮಾಡದೇ ದೈವದಿಂದಲೇ ಎಲ್ಲಾ ಕೆಲಸ ಆಗಬೇಕು ಎಂದರೆ ಅದು ಮೂರ್ಖತನ.
ಮಾ ತೇ ಸಂಗೋಽಸ್ತ್ವಕರ್ಮಣಿ
ಕರ್ಮ ಮಾಡದೆ ಫಲ ಸಿಗಲುಲ  ಸಾಧ್ಯವಿಲ್ಲ  ಎನ್ನುತ್ತಾನೆ ಶ್ರೀಕೃಷ್ಣ.

ಕಾಡಿನ ರಾಜನೇ ಆದರೂ ಸಿಂಹ ಆಹಾರಕ್ಕಾಗಿ ಬೇಟೆಯಾಡಲೇ ಬೇಕು. ಸುಮ್ಮನೆ ಬಾಯಗಲಿಸಿ ಕುಳಿತರೆ ಅದರ ಬಾಯಿಗೆ ಪ್ರಾಣಿಗಳು ತಾವಾಗಿಯೇ ಬಂದು ಬೀಳಲಾರವು.
ಪುರುಷಪ್ರಯತ್ನ ಬೇಕೇ  ಬೇಕು.
ಅದಕ್ಕೆ ದೈವಸಹಾಯವೂ ಬೇಕು ಆಗಲೇ ಕಾರ್ಯಕ್ಕೆ ಜಯ.

No comments:

Post a Comment