ಸುಭಾಷಿತ - ೬೨
ಅಧಾರ್ಮಿಕೋ ನರೋ ಯೋ ಹಿ ಯಸ್ಯ ಚಾಪ್ಯನೃತಂ ಧನಮ್।
ಹಿಂಸಾರತಶ್ಚ ಯೋ ನಿತ್ಯಂ ನೇಹಾಸೌ ಸುಖಮೇಧತೇ।।
(ಮನು ಸ್ಮೃತಿ)
ಅನ್ವಯ:
ಯಃ ನರಃ ಅಧಾರ್ಮಿಕಃ ಯಸ್ಯ ಧನಂ ಅಪಿ ಅನೃತಂ ಯಃ ನಿತ್ಯಂ ಹಿಂಸಾರತಃ ಚ ಅಸೌ ಇಹ ಸುಖಂ ನ ಏಧತೇ।
ಭಾವಾರ್ಥ:
ಯಾವ ಮನುಷ್ಯನು ಅಧಾರ್ಮಿಕನಾಗಿರುವನೋ, ಮೋಸದಿಂದ ಧನಾರ್ಜನೆಯನ್ನು ಮಾಡುತ್ತಾನೋ, ನಿತ್ಯ ಪರಹಿಂಸೆಯಲ್ಲಿ ತೊಡಗಿರುತ್ತಾನೋ ಅವನೆಂದಿಗೂ ಈ ಲೋಕದಲ್ಲಿ ಸುಖವನ್ನು ಹೊಂದುವುದಿಲ್ಲ.
ಹಣದಿಂದ ಸುಖದ ಸೌಲಭ್ಯಗಳನ್ನು ಕೊಂಡುಕೊಳ್ಳಬಹುದು,ಆದರೆ ಸುಖವನ್ನು ಕೊಳ್ಳಲಾಗದು. ಸುಖಕ್ಕಾಗಿ ಅಧರ್ಮಮಾರ್ಗದಿಂದಲೋ ಸುಳ್ಳು ಹೇಳಿಯೋ ಹಿಂಸೆಯ ಮೂಲಕವೋ ಹಣ ಸಂಪಾದಿಸಿದರೆ ಅದರಿಂದ ಸುಖವೆಂದೂ ಸಿಗುವಂತಿಲ್ಲ. ಇತರರ ಗೋರಿಯ ಮೇಲೆ ಸೌಧ ಕಟ್ಟಿದರೆ ಅದು ಅಲ್ಲಾಡುತ್ತಲೇ ಇರುತ್ತದೆ. ಯಾವಾಗ ಬೀಳುತ್ತೇನೋ ಎಂಬ ಭಯ ಕಾಡುತ್ತಲೇ ಇರುತ್ತದೆ. ತಾನು ಹೇಳಿದ ಸುಳ್ಳು ಮಾಡಿದ ಮೋಸ ಹಿಂಸೆಗಳು ಅಂತರಂಗದಲ್ಲಿ ಚುಚ್ಚದೇ ಇರದು. ಚುಚ್ಚುತ್ತಿರುವ ಅಂತರಂಗದಲ್ಲಿ ಸುಖ ಹೇಗೆ ನೆಲೆಸೀತು? ಅಂತರಂಗಸುಖವನ್ನು ನೀಡುವ ಲಕ್ಷ್ಮಿಯು ಸತ್ಯ ಧರ್ಮ ನ್ಯಾಯವನ್ನು ಅನುಸರಿಸಿ ಬರುವವಳು. ಕೀರ್ತಿಯು ತ್ಯಾಗವನ್ನನುಸರಿಸಿ ಬರುತ್ತದೆ
ಅಧಾರ್ಮಿಕೋ ನರೋ ಯೋ ಹಿ ಯಸ್ಯ ಚಾಪ್ಯನೃತಂ ಧನಮ್।
ಹಿಂಸಾರತಶ್ಚ ಯೋ ನಿತ್ಯಂ ನೇಹಾಸೌ ಸುಖಮೇಧತೇ।।
(ಮನು ಸ್ಮೃತಿ)
ಅನ್ವಯ:
ಯಃ ನರಃ ಅಧಾರ್ಮಿಕಃ ಯಸ್ಯ ಧನಂ ಅಪಿ ಅನೃತಂ ಯಃ ನಿತ್ಯಂ ಹಿಂಸಾರತಃ ಚ ಅಸೌ ಇಹ ಸುಖಂ ನ ಏಧತೇ।
ಭಾವಾರ್ಥ:
ಯಾವ ಮನುಷ್ಯನು ಅಧಾರ್ಮಿಕನಾಗಿರುವನೋ, ಮೋಸದಿಂದ ಧನಾರ್ಜನೆಯನ್ನು ಮಾಡುತ್ತಾನೋ, ನಿತ್ಯ ಪರಹಿಂಸೆಯಲ್ಲಿ ತೊಡಗಿರುತ್ತಾನೋ ಅವನೆಂದಿಗೂ ಈ ಲೋಕದಲ್ಲಿ ಸುಖವನ್ನು ಹೊಂದುವುದಿಲ್ಲ.
ಹಣದಿಂದ ಸುಖದ ಸೌಲಭ್ಯಗಳನ್ನು ಕೊಂಡುಕೊಳ್ಳಬಹುದು,ಆದರೆ ಸುಖವನ್ನು ಕೊಳ್ಳಲಾಗದು. ಸುಖಕ್ಕಾಗಿ ಅಧರ್ಮಮಾರ್ಗದಿಂದಲೋ ಸುಳ್ಳು ಹೇಳಿಯೋ ಹಿಂಸೆಯ ಮೂಲಕವೋ ಹಣ ಸಂಪಾದಿಸಿದರೆ ಅದರಿಂದ ಸುಖವೆಂದೂ ಸಿಗುವಂತಿಲ್ಲ. ಇತರರ ಗೋರಿಯ ಮೇಲೆ ಸೌಧ ಕಟ್ಟಿದರೆ ಅದು ಅಲ್ಲಾಡುತ್ತಲೇ ಇರುತ್ತದೆ. ಯಾವಾಗ ಬೀಳುತ್ತೇನೋ ಎಂಬ ಭಯ ಕಾಡುತ್ತಲೇ ಇರುತ್ತದೆ. ತಾನು ಹೇಳಿದ ಸುಳ್ಳು ಮಾಡಿದ ಮೋಸ ಹಿಂಸೆಗಳು ಅಂತರಂಗದಲ್ಲಿ ಚುಚ್ಚದೇ ಇರದು. ಚುಚ್ಚುತ್ತಿರುವ ಅಂತರಂಗದಲ್ಲಿ ಸುಖ ಹೇಗೆ ನೆಲೆಸೀತು? ಅಂತರಂಗಸುಖವನ್ನು ನೀಡುವ ಲಕ್ಷ್ಮಿಯು ಸತ್ಯ ಧರ್ಮ ನ್ಯಾಯವನ್ನು ಅನುಸರಿಸಿ ಬರುವವಳು. ಕೀರ್ತಿಯು ತ್ಯಾಗವನ್ನನುಸರಿಸಿ ಬರುತ್ತದೆ