Thursday 17 January 2019

ಸುಭಾಷಿತ  - ೬


ನಮಂತಿ ಫಲಿತಾ ವೃಕ್ಷಾಃ ನಮಂತಿ ಚ ಬುಧಾ ಜನಾಃ|
ಶುಷ್ಕಕಾಷ್ಟಾನಿ ಮೂರ್ಖಾಶ್ಚ ಭಿದ್ಯಂತೇ ನ ನಮಂತಿ ಹಿ॥

*ಅನ್ವಯ ಅರ್ಥ:*

ಫಲಿತಾಃ ವೃಕ್ಷಾಃ(ಹಣ್ಣುಗಳಿರುವ ಮರಗಳು)
 ನಮಂತಿ(ಬಾಗುತ್ತವೆ)
ಚ(ಮತ್ತು)
ಬುಧಾಃ ಜನಾಃ(ಜ್ಞಾನಿಗಳಾದ ಜನರು)
ನಮಂತಿ(ಬಾಗುತ್ತಾರೆ)
ಶುಷ್ಕಕಾಷ್ಠಾನಿ (ಒಣಗಿದ ಮರದ ಕೋಲುಗಳು)
ಚ (ಮತ್ತು)
ಮೂರ್ಖಾಃ(ಮೂರ್ಖರು)
ಭಿದ್ಯಂತೇ (ಮುರಿಯುತ್ತವೆ)
ನ ನಮಂತಿ(ಬಾಗುವುದಿಲ್ಲ).

*ಭಾವಾರ್ಥ:*

ನಯ ವಿನಯ ಸಜ್ಜನರ ಲಕ್ಷಣ. ಹಣ್ಣುಗಳು ಹೆಚ್ಚಿದ್ದಷ್ಟೂ ಮರಗಳು ಹೆಚ್ಚು ಹೆಚ್ಚು ಬಾಗುತ್ತವೆ. ಹಣ್ಣುಗಳಿವೆ ಎಂದು ಗರ್ವದಿಂದ ಅವು ಸೆಟೆಯುವುದಿಲ್ಲ.  ಜ್ಞಾನ ಹೆಚ್ಚಿದಂತೆ ಸಜ್ಜನರು ಹೆಚ್ಚು ಹೆಚ್ಚು ವಿನಯವಂತರಾಗುತ್ತಾರೆ.
ಉಪಯೋಗಲ್ಲದ, ಹೂ ಹಣ್ಣುಗಳಿಲ್ಲದ ಮರ ಮುರಿದೀತೇ ಹೊರತು ಎಂದೂ ಬಾಗುವುದಿಲ್ಲ.
ಮೂರ್ಖರು ಹಾಗೆಯೇ,
ನಯವಿನಯ ಅವರಲ್ಲಿಲ್ಲ. ಏನೂ ಅರಿಯದಿದ್ದರೂ ಜಂಭದಿಂದ ಬೀಗುತ್ತಾರೆ. ಎಂದಿಗೂ ಜ್ಞಾನಿಗಳ ಮುಂದೆ ಗುರುಹಿರಿಯರ ಮುಂದೆ ವಿನಯದಿಂದ ವರ್ತಿಸಲಾರರು.

No comments:

Post a Comment