ಸುಭಾಷಿತ ೯
ಗುಣಾನಾಮಂತರಂ ಪ್ರಾಯಃ ತಜ್ಞೋ ವೇತ್ತಿ ನ ಚಾಪರಃ।ಮಾಲತೀಮಲ್ಲಿಕಾಮೋದಂ ಘ್ರಾಣಂ ವೇತ್ತಿ ನ ಲೋಚನಮ್।।
ಅನ್ವಯ ಅರ್ಥ:
ಗುಣಾನಾಂ ಅಂತರಂ (ಗುಣಗಳಲ್ಲಿನ ಭೇದವನ್ನು) ತಜ್ಞಃ(ನಿಪುಣನು)
ವೇತ್ತಿ (ಅರಿಯುತ್ತಾನೆ)
ನ ಅಪರಃ(ವೇತ್ತಿ)(ಬೇರೆಯವ ಅರಿಯಲಾರ) ಮಾಲತೀಮಲ್ಲಿಕಾಮೋದಂ(ಜಾಜಿ ಮಲ್ಲಿಗೆಗಳ ಪರಿಮಳವನ್ನು) ಘ್ರಾಣಂ (ಮೂಗು)
ವೇತ್ತಿ (ಅರಿಯುತ್ತದೆ)
ಲೋಚನಮ್ (ಕಣ್ಣು) (ನ ವೇತ್ತಿ)(ಅರಿಯಲಾರದು).
ಭಾವಾರ್ಥ:
ಒಂದು ವಿಷಯದ ಗುಣಾವಗುಣಗಳನ್ನು ವಿಮರ್ಶಿಸಬೇಕಾದರೆ ಆ ವಿಷಯದ ಬಗ್ಗೆ ತಿಳಿವಳಿಕೆ ಇರಬೇಕು. ವಿಷಯ ಅರಿಯದೆ ಟೀಕಿಸುವುದು ಕೇವಲ ಮೂರ್ಖತನ. ಮಲ್ಲಿಗೆಯ ಜಾಜಿಯ ಸೌಂದರ್ಯವನ್ನು ಕಣ್ಣು ನೋಡಬಹುದೇ ಹೊರತು ಅದರ ಗಂಧದ ಆಸ್ವಾದನೆ ಆ ಕಣ್ಣಿಗೆ ಸಾಧ್ಯವಿಲ್ಲ. ಒಳ್ಳೆಯ ಸಂಗೀತವನ್ನು ಎಲ್ಲರೂ ಕೇಳಬಹುದು. ಆದರೆ ಅದನ್ನು ಸಂಪೂರ್ಣವಾಗಿ ಅರಿತು ಆನಂದಿಸಬೇಕಾದರೆ ಸಂಗೀತದ ಜ್ಞಾನ ಬೇಕೇ ಬೇಕು. ಕಾವ್ಯದ ಜ್ಞಾನವಿಲ್ಲವನಿಗೆ ಕಾಳಿದಾಸನ ಕಾವ್ಯವೂ ರಸಹೀನವಾಗಿ ಕಾಣಿಸುತ್ತದೆ. ಭಗವಂತನ ಕಲ್ಪನೆಯೇ ಇಲ್ಲದ ಮೂರ್ಖನಿಗೆ ಭಗವದ್ಗೀತೆಯಲ್ಲೂ ಹುಳುಕೇ ಕಾಣಿಸುವುದಲ್ಲದೆ ಅದರ ಗುರುತ್ವದ ಅರಿವೇ ಆಗಲಾರದು.
ಗುಣಾನಾಮಂತರಂ ಪ್ರಾಯಃ ತಜ್ಞೋ ವೇತ್ತಿ ನ ಚಾಪರಃ।ಮಾಲತೀಮಲ್ಲಿಕಾಮೋದಂ ಘ್ರಾಣಂ ವೇತ್ತಿ ನ ಲೋಚನಮ್।।
ಅನ್ವಯ ಅರ್ಥ:
ಗುಣಾನಾಂ ಅಂತರಂ (ಗುಣಗಳಲ್ಲಿನ ಭೇದವನ್ನು) ತಜ್ಞಃ(ನಿಪುಣನು)
ವೇತ್ತಿ (ಅರಿಯುತ್ತಾನೆ)
ನ ಅಪರಃ(ವೇತ್ತಿ)(ಬೇರೆಯವ ಅರಿಯಲಾರ) ಮಾಲತೀಮಲ್ಲಿಕಾಮೋದಂ(ಜಾಜಿ ಮಲ್ಲಿಗೆಗಳ ಪರಿಮಳವನ್ನು) ಘ್ರಾಣಂ (ಮೂಗು)
ವೇತ್ತಿ (ಅರಿಯುತ್ತದೆ)
ಲೋಚನಮ್ (ಕಣ್ಣು) (ನ ವೇತ್ತಿ)(ಅರಿಯಲಾರದು).
ಭಾವಾರ್ಥ:
ಒಂದು ವಿಷಯದ ಗುಣಾವಗುಣಗಳನ್ನು ವಿಮರ್ಶಿಸಬೇಕಾದರೆ ಆ ವಿಷಯದ ಬಗ್ಗೆ ತಿಳಿವಳಿಕೆ ಇರಬೇಕು. ವಿಷಯ ಅರಿಯದೆ ಟೀಕಿಸುವುದು ಕೇವಲ ಮೂರ್ಖತನ. ಮಲ್ಲಿಗೆಯ ಜಾಜಿಯ ಸೌಂದರ್ಯವನ್ನು ಕಣ್ಣು ನೋಡಬಹುದೇ ಹೊರತು ಅದರ ಗಂಧದ ಆಸ್ವಾದನೆ ಆ ಕಣ್ಣಿಗೆ ಸಾಧ್ಯವಿಲ್ಲ. ಒಳ್ಳೆಯ ಸಂಗೀತವನ್ನು ಎಲ್ಲರೂ ಕೇಳಬಹುದು. ಆದರೆ ಅದನ್ನು ಸಂಪೂರ್ಣವಾಗಿ ಅರಿತು ಆನಂದಿಸಬೇಕಾದರೆ ಸಂಗೀತದ ಜ್ಞಾನ ಬೇಕೇ ಬೇಕು. ಕಾವ್ಯದ ಜ್ಞಾನವಿಲ್ಲವನಿಗೆ ಕಾಳಿದಾಸನ ಕಾವ್ಯವೂ ರಸಹೀನವಾಗಿ ಕಾಣಿಸುತ್ತದೆ. ಭಗವಂತನ ಕಲ್ಪನೆಯೇ ಇಲ್ಲದ ಮೂರ್ಖನಿಗೆ ಭಗವದ್ಗೀತೆಯಲ್ಲೂ ಹುಳುಕೇ ಕಾಣಿಸುವುದಲ್ಲದೆ ಅದರ ಗುರುತ್ವದ ಅರಿವೇ ಆಗಲಾರದು.
No comments:
Post a Comment