Thursday 21 March 2019

ಸುಭಾಷಿತ - ೫೮

ವೃಷ್ಟಿಭಿಃ ಪೂರಿತಾ ಗ್ರಾಮ್ಯಾ ನೂನಂ ಕ್ಷುದ್ರಾಃ ಸರೋವರಾಃ। ತಟಂ ಭಿತ್ವಾ ಪ್ರಯಾಂತೀಹ ಧನಂ ಪ್ರಾಪ್ತಃ ಖಲೋ ಯಥಾ।

ಅನ್ವಯ:

ವೃಷ್ಟಿಭಿಃ (ಮಳೆಯಿಂದ)
 ಪೂರಿತಾಃ(ತುಂಬಿದ)
 ಗ್ರಾಮ್ಯಾಃ ಸರೋವರಾಃ(ಊರಿನ ಸರೋವರಗಳು)
  ನೂನಂ ಕ್ಷುದ್ರಾಃ(ಖಂಡಿತವಾಗಿಯೂ ಅಲ್ಪ ಗುಣದವು)
 (ತೇ) ಧನಂ ಪ್ರಾಪ್ಯ ಖಲಃ ಯಥಾ (ತಥಾ)(ಸ್ವಲ್ಪ ದಿನದಿಂದ ಕೊಬ್ಬಿ ಹಾರಾಡುವ ದುಷ್ಟರಂತೆ)
ತಟಂ ಭಿತ್ವಾ ಪ್ರಯಾಂತಿ(ಕಟ್ಟೆಯೊಡೆದು ಹರಿಯುತ್ತವೆ)


ಭಾವಾರ್ಥ:

 ಐಶ್ವರ್ಯ ಬಂದಾಗ ಹಾರಾಡುವ ದುರ್ಜನರಂತೆ ಮಳೆ ಬಂದಾಗ ಕಟ್ಟೆಯೊಡೆದು ಹರಿವ ಕೆರೆ ಸರೋವರಗಳು ತೀರಾ ಕ್ಷುದ್ರ. ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದಾನು ಎಂಬ ಗಾದೆಯಿದೆ. ಸಂಪತ್ತು ತಾಕತ್ತು ಇಧ್ದರೆ ಸಾಲದು. ಅದರ ವಿನಿಯೋಗದ ಅರಿವಿರಬೇಕು. ಎಲ್ಲೆ ಮೀರಿದ ನಡತೆ ಸಾಧುವಲ್ಲ. ಇದೆಯೆಂದು ಅಂಧಾಧುಂದು ಖರ್ಚು ಮಾಡುವುದು, ದುರಾಸೆಯಿಂದ ಬಡವರನ್ನು ಇನ್ನಷ್ಟು ದೋಚುವುದು, ಶಕ್ತಿ ಇದೆಯೆಂದು ದುರ್ಬಲರ ಮೇಲೆ ಸವಾರಿ ಮಾಡುವುದು ಈ ಆಟಾಟೋಪ ಆರ್ಭಟವೆಲ್ಲ ದುರ್ಜನಿಗೆ ಮಾತ್ರ. ಸಜ್ಜನರು ಐಶ್ವರ್ಯವಿದ್ದಾಗ ಆರಕ್ಕೆ ಏರಲಾರರು. ಬಡತನ ಬಂದಾಗ ಮೂರಕ್ಕೆ ಇಳಿಯಲಾರರು. ಧಾರಾಕಾರ ಮಳೆ ಸುರಿದಾಗ ಕೆರೆತೊರೆಸರೋವರಗಳು ದಡವನ್ನು ಹಾಯ್ದು ಹಾವಳಿ ಮಾಡುತ್ತವೆ. ಎಷ್ಟೇ ಮಳೆ ಬರಲಿ ಎಷ್ಟೇ ನದಿಗಳು ನೀರನ್ನು ಸುರಿಯಲಿ ಸಮುದ್ರವು ಉಕ್ಕಿ ಹರಿಯಲಾರದು. ಸದ್ಗುಣಶೀಲನಾದ ಜ್ಞಾನಿ ಎಂದೂ ಗರ್ವಪಡುವುದಿಲ್ಲ. ಅರ್ಧವೂ ತಿಳಿಯದ ಅಜ್ಞಾನಿ ಪಂಡಿತರಿಗಿಂತ ಹೆಚ್ಚು ಅಬ್ಬರಿಸುತ್ತಾನೆ.

No comments:

Post a Comment