ಸುಭಾಷಿತ - ೫೪:
ದೂರತಃ ಶೋಭತೇ ಮೂರ್ಖೋ ಲಂಬಶಾಟಪಟಾವೃತಃ।ತಾವಚ್ಚ ಶೋಭತೇ ಚಾಸೌ ಯಾವತ್ಕಿಂಚಿನ್ನ ಭಾಷತೇ।।
ಅನ್ವಯಾರ್ಥ:
ಲಂಬಶಾಟಪಟಾವೃತಃ (ಆಡಂಬರದ ಉಡುಗೆತೊಡುಯುಟ್ಟ)
ಮೂರ್ಖಃ (ಬುದ್ಧಿಹೀನನು)
ದೂರತಃ (ಏವ)(ದೂರದಿಂದ ಮಾತ್ರವೇ)
ಶೋಭತೇ(ಶೋಭಿಸುತ್ತಾನೆ). (ತದಪಿ ಚ ಅದೂ ಸಹ )
ಅಸೌ (ಇವನು)
ಯಾವತ್ ಕಿಂಚಿತ್ ನ ಭಾಷತೇ (ಸ್ವಲ್ಪವೂ ಮಾತಾಡದೇ ಇರುತ್ತಾನೋ)
ತಾವತ್(ಏವ) (ಅಲ್ಲಿವರೆಗೆ ಮಾತ್ರ)
ಶೋಭತೇ (ಶೋಭಿಸುತ್ತಾನೆ)
ಭಾವಾರ್ಥ:
ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು ಎಂಬಂತೆ ಮಹಾಪಂಡಿತನ ಹಾಗೆ ವೇಷಭೂಷಣ ತೊಟ್ಟು ಆಡಂಬರ ತೋರಿದರೆ ದೂರದಿಂದ ನೋಡಿದವರು ನಂಬಬಹುದು. ಮೌನವಾಗಿದ್ದಷ್ಟು ಸಮಯ ಹೇಗೂ ನಡೆದಿತ್ತು, ಆದರೆ ಬಾಯಿ ಬಿಟ್ಟರೆ ಮೂರ್ಖತನವೆಲ್ಲ ಹೊರ ಬರುತ್ತದೆ. ತಿಳಿದಿರುವುದನ್ನು ಇತರರಿಗೆ ಹೇಳುವುದು ಸೌಜನ್ಯ ಆದರೆ ತಿಳಿಯದಿರುವುದನ್ನು ಹೇಳ ಹೊರಡುವುದು, ತಾನು ತಿಳಿದವನು ಎಂದುಕೊಳ್ಳುವುದು ಮೂರ್ಖತನ. ಎಲ್ಲರೂ ಎಲ್ಲವನ್ನೂ ತಿಳಿದಿರಲು ಸಾಧ್ಯವೇ ಇಲ್ಲ. ಒಂದರಲ್ಲಿ ಪರಿಣತಿ ಹೊಂದಿದವನು ಇನ್ನೊಂದು ವಿಷಯದಲ್ಲಿ ಮೂಢನೇ ಆಗಿರುತ್ತಾನೆ. ಎಲ್ಲವನ್ನೂ ತಿಳಿದವನು ಭಗವಂತ ಮಾತ್ರ. ಗುಡ್ಡಕ್ಕೊಂದು ಗುಡ್ಡ ಅಡ್ಡವಿದ್ದೇ ಇದೆ. ಎಲ್ಲರೆದುರು ಗರ್ವತೋರುವುದು ಸಲ್ಲ. ತಾನಾರು ತಾನೆಷ್ಟು ಎಂಬುದರ ಅರಿವು ಸದಾ ಇರಲೇಬೇಕು. ತಿಳಿದಂತೆ ನಟಿಸಿ ಆಡಂಬರ ತೋರಿದರೆ ಒಂದಲ್ಲಾ ಒಂದು ದಿನ ಬಣ್ಣ ಬಯಲಾಗದೆ ಇರದು. ಆದುದರಿಂದ ತಿಳಿಯದಿರುವಲ್ಲಿ ಮೌನವಾಗಿರುವುದೇ ಜಾಣತನ. ಎಲ್ಲರೂ ಮೆಚ್ಚಬೇಕೆಂದು ಇಲ್ಲದ ಪಾಂಡಿತ್ಯವನ್ನು ಹರಿಯಬಿಟ್ಟರೆ ಮಾನ ಹೋಗುವುದು ನಿಶ್ಚಯ. ಭರ್ತೃಹರಿಯು ನೀತಿ ಶತಕದಲ್ಲಿ ಹೇಳಿದಂತೆ ಪಾಂಡಿತ್ಯ ಇಲ್ಲದಾಗ ಮೌನವೇ ಭೂಷಣ.
ದೂರತಃ ಶೋಭತೇ ಮೂರ್ಖೋ ಲಂಬಶಾಟಪಟಾವೃತಃ।ತಾವಚ್ಚ ಶೋಭತೇ ಚಾಸೌ ಯಾವತ್ಕಿಂಚಿನ್ನ ಭಾಷತೇ।।
ಅನ್ವಯಾರ್ಥ:
ಲಂಬಶಾಟಪಟಾವೃತಃ (ಆಡಂಬರದ ಉಡುಗೆತೊಡುಯುಟ್ಟ)
ಮೂರ್ಖಃ (ಬುದ್ಧಿಹೀನನು)
ದೂರತಃ (ಏವ)(ದೂರದಿಂದ ಮಾತ್ರವೇ)
ಶೋಭತೇ(ಶೋಭಿಸುತ್ತಾನೆ). (ತದಪಿ ಚ ಅದೂ ಸಹ )
ಅಸೌ (ಇವನು)
ಯಾವತ್ ಕಿಂಚಿತ್ ನ ಭಾಷತೇ (ಸ್ವಲ್ಪವೂ ಮಾತಾಡದೇ ಇರುತ್ತಾನೋ)
ತಾವತ್(ಏವ) (ಅಲ್ಲಿವರೆಗೆ ಮಾತ್ರ)
ಶೋಭತೇ (ಶೋಭಿಸುತ್ತಾನೆ)
ಭಾವಾರ್ಥ:
ಹೊರಗೆ ಶೃಂಗಾರ ಒಳಗೆ ಗೋಳಿಸೊಪ್ಪು ಎಂಬಂತೆ ಮಹಾಪಂಡಿತನ ಹಾಗೆ ವೇಷಭೂಷಣ ತೊಟ್ಟು ಆಡಂಬರ ತೋರಿದರೆ ದೂರದಿಂದ ನೋಡಿದವರು ನಂಬಬಹುದು. ಮೌನವಾಗಿದ್ದಷ್ಟು ಸಮಯ ಹೇಗೂ ನಡೆದಿತ್ತು, ಆದರೆ ಬಾಯಿ ಬಿಟ್ಟರೆ ಮೂರ್ಖತನವೆಲ್ಲ ಹೊರ ಬರುತ್ತದೆ. ತಿಳಿದಿರುವುದನ್ನು ಇತರರಿಗೆ ಹೇಳುವುದು ಸೌಜನ್ಯ ಆದರೆ ತಿಳಿಯದಿರುವುದನ್ನು ಹೇಳ ಹೊರಡುವುದು, ತಾನು ತಿಳಿದವನು ಎಂದುಕೊಳ್ಳುವುದು ಮೂರ್ಖತನ. ಎಲ್ಲರೂ ಎಲ್ಲವನ್ನೂ ತಿಳಿದಿರಲು ಸಾಧ್ಯವೇ ಇಲ್ಲ. ಒಂದರಲ್ಲಿ ಪರಿಣತಿ ಹೊಂದಿದವನು ಇನ್ನೊಂದು ವಿಷಯದಲ್ಲಿ ಮೂಢನೇ ಆಗಿರುತ್ತಾನೆ. ಎಲ್ಲವನ್ನೂ ತಿಳಿದವನು ಭಗವಂತ ಮಾತ್ರ. ಗುಡ್ಡಕ್ಕೊಂದು ಗುಡ್ಡ ಅಡ್ಡವಿದ್ದೇ ಇದೆ. ಎಲ್ಲರೆದುರು ಗರ್ವತೋರುವುದು ಸಲ್ಲ. ತಾನಾರು ತಾನೆಷ್ಟು ಎಂಬುದರ ಅರಿವು ಸದಾ ಇರಲೇಬೇಕು. ತಿಳಿದಂತೆ ನಟಿಸಿ ಆಡಂಬರ ತೋರಿದರೆ ಒಂದಲ್ಲಾ ಒಂದು ದಿನ ಬಣ್ಣ ಬಯಲಾಗದೆ ಇರದು. ಆದುದರಿಂದ ತಿಳಿಯದಿರುವಲ್ಲಿ ಮೌನವಾಗಿರುವುದೇ ಜಾಣತನ. ಎಲ್ಲರೂ ಮೆಚ್ಚಬೇಕೆಂದು ಇಲ್ಲದ ಪಾಂಡಿತ್ಯವನ್ನು ಹರಿಯಬಿಟ್ಟರೆ ಮಾನ ಹೋಗುವುದು ನಿಶ್ಚಯ. ಭರ್ತೃಹರಿಯು ನೀತಿ ಶತಕದಲ್ಲಿ ಹೇಳಿದಂತೆ ಪಾಂಡಿತ್ಯ ಇಲ್ಲದಾಗ ಮೌನವೇ ಭೂಷಣ.
No comments:
Post a Comment