ಸುಭಾಷಿತ - ೪೬
ಪಾತ್ರಾಪಾತ್ರವಿಶೇಷೋಽಸ್ತಿ ಧೇನುಪನ್ನಗಯೋರಿವ। ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್।।
ಅನ್ವಯಾರ್ಥ:
ಧೇನುಪನ್ನಗಯೋಃ ಇವ(ಗೋವು ಹಾವುಗಳಂತೆ) ಪಾತ್ರಾಪಾತ್ರವಿಶೇಷಃ ಅಸ್ತಿ(ಸತ್ಪಾತ್ರರಿಗೂ ಅಪಾತ್ರರಿಗೂ ವ್ಯತ್ಯಾಸವಿದೆ)
(ಧೇನ್ವಾ ಗೋವಿನಿಂದ)
ತೃಣಾತ್ (ಹುಲ್ಲಿನಿಂದ)
ದುಗ್ಧಂ (ಹಾಲು)
ಉತ್ಪದ್ಯತೇ (ಉತ್ಪಾದಿಸಲ್ಪಡುತ್ತದೆ)
(ಪನ್ನಗೇನ ಹಾವಿನಿಂದ)
ದುಗ್ಧಾತ್(ಹಾಲಿನಿಂದ)
ವಿಷಂ (ವಿಷವು)
ಉತತ್ಪದ್ಯತೇ(ಉತ್ಪಾದಿಸಲ್ಪಡುತ್ತದೆ).
ಭಾವಾರ್ಥ:
ದಾನವು ಪುಣ್ಯಕಾರ್ಯವೇ ಹೌದು. ಆದರೆ ಪಾತ್ರಾಪಾತ್ರವಿವೇಚನೆಯಿಲ್ಲದೆ ದಾನಮಾಡಿದರೆ ಅದು ಪಾಪಕಾರಣವೂ ಆದೀತು. ಹಸುವಿಗೆ ಹುಲ್ಲನ್ನೇ ಕೊಟ್ಟರೂ ಅದು ಅಮೃತಸಮಾನವಾದ ಹಾಲನ್ನೇ ಕೊಡುತ್ತದೆ. ವಿಷಪೂರಿತ ಹಾವಿಗೆ ಹಾಲನ್ನೇ ಕೊಟ್ಟರೂ ಅದರ ಬಾಯಲ್ಲಿ ವಿಷವೇ ತಾನೇ ಬರುವುದು? ಸಜ್ಜನರು ತಮಗೆ ಉಪಕಾರ ಮಾಡಿದವರನ್ನು ಎಂದೂ ಮರೆಯಲಾರರು ಮಾತ್ರವಲ್ಲ ಅಪಕಾರ ಮಾಡಿದವರಿಗೂ ಉಪಕಾರವನ್ನೇ ಮಾಡುವವರು. ಮರಕ್ಕೆ ಕಲ್ಲನ್ನು ಹೊಡೆದರೂ ಅದು ಕೊಡುವುದು ಹಣ್ಣನ್ನು. ಹೂವಿನ ಗಿಡವೊಂದು ತಿನ್ನುವುದು ದುರ್ವಾಸನೆಯ ಗೊಬ್ಬರವನ್ನಾದರೂ ಹೂವಿಗೆ ದುರ್ಗಂಧವಿದೆಯೇ? ದುಷ್ಟರಿಗೆ ದಾನವೋ ಸಹಾಯವೋ ನೀಡಿದರೆ ಅವರ ಅವರ ಪಾಪದಲ್ಲಿ ನಾವುಗಳೂ ಭಾಗಿಗಳಾಗುತ್ತೇವೆಯೇ ಹೊರತು ಯಾವ ಪುಣ್ಯವೂ ಇಲ್ಲ ಸುಖವೂ ಇಲ್ಲ. ದೇಹಿ ಎಂದವರಿಗೆ ನಾಸ್ತಿ ಎನ್ನಬಾರದು ನಿಜ ಆದರೆ ದೇಹಿ ಅಂದವನು ಎಂಥವನು ಎಂದು ನೋಡಬೇಡವೇ?
ಭಯೋತ್ಪಾದಕನೊಬ್ಬ ಕೇಳಿದನೆಂದ ಆಶ್ರಯ ನೀಡಿದರೆ ಅದು ಪುಣ್ಯಕಾರ್ಯ ಹೇಗಾದೀತು?
ನೀಡುವವನು ಅದರ ಸದ್ವಿನಿಯೋಗ ಆಗುತ್ತದೆಯೇ ಎಂಬುದನ್ನು ಗಮನಿಸಬೇಕು. ಆಗಲೇ ಆ ದಾನಕ್ಕೊಂದು ಬೆಲೆ.
ಪಾತ್ರಾಪಾತ್ರವಿಶೇಷೋಽಸ್ತಿ ಧೇನುಪನ್ನಗಯೋರಿವ। ತೃಣಾದುತ್ಪದ್ಯತೇ ದುಗ್ಧಂ ದುಗ್ಧಾದುತ್ಪದ್ಯತೇ ವಿಷಮ್।।
ಅನ್ವಯಾರ್ಥ:
ಧೇನುಪನ್ನಗಯೋಃ ಇವ(ಗೋವು ಹಾವುಗಳಂತೆ) ಪಾತ್ರಾಪಾತ್ರವಿಶೇಷಃ ಅಸ್ತಿ(ಸತ್ಪಾತ್ರರಿಗೂ ಅಪಾತ್ರರಿಗೂ ವ್ಯತ್ಯಾಸವಿದೆ)
(ಧೇನ್ವಾ ಗೋವಿನಿಂದ)
ತೃಣಾತ್ (ಹುಲ್ಲಿನಿಂದ)
ದುಗ್ಧಂ (ಹಾಲು)
ಉತ್ಪದ್ಯತೇ (ಉತ್ಪಾದಿಸಲ್ಪಡುತ್ತದೆ)
(ಪನ್ನಗೇನ ಹಾವಿನಿಂದ)
ದುಗ್ಧಾತ್(ಹಾಲಿನಿಂದ)
ವಿಷಂ (ವಿಷವು)
ಉತತ್ಪದ್ಯತೇ(ಉತ್ಪಾದಿಸಲ್ಪಡುತ್ತದೆ).
ಭಾವಾರ್ಥ:
ದಾನವು ಪುಣ್ಯಕಾರ್ಯವೇ ಹೌದು. ಆದರೆ ಪಾತ್ರಾಪಾತ್ರವಿವೇಚನೆಯಿಲ್ಲದೆ ದಾನಮಾಡಿದರೆ ಅದು ಪಾಪಕಾರಣವೂ ಆದೀತು. ಹಸುವಿಗೆ ಹುಲ್ಲನ್ನೇ ಕೊಟ್ಟರೂ ಅದು ಅಮೃತಸಮಾನವಾದ ಹಾಲನ್ನೇ ಕೊಡುತ್ತದೆ. ವಿಷಪೂರಿತ ಹಾವಿಗೆ ಹಾಲನ್ನೇ ಕೊಟ್ಟರೂ ಅದರ ಬಾಯಲ್ಲಿ ವಿಷವೇ ತಾನೇ ಬರುವುದು? ಸಜ್ಜನರು ತಮಗೆ ಉಪಕಾರ ಮಾಡಿದವರನ್ನು ಎಂದೂ ಮರೆಯಲಾರರು ಮಾತ್ರವಲ್ಲ ಅಪಕಾರ ಮಾಡಿದವರಿಗೂ ಉಪಕಾರವನ್ನೇ ಮಾಡುವವರು. ಮರಕ್ಕೆ ಕಲ್ಲನ್ನು ಹೊಡೆದರೂ ಅದು ಕೊಡುವುದು ಹಣ್ಣನ್ನು. ಹೂವಿನ ಗಿಡವೊಂದು ತಿನ್ನುವುದು ದುರ್ವಾಸನೆಯ ಗೊಬ್ಬರವನ್ನಾದರೂ ಹೂವಿಗೆ ದುರ್ಗಂಧವಿದೆಯೇ? ದುಷ್ಟರಿಗೆ ದಾನವೋ ಸಹಾಯವೋ ನೀಡಿದರೆ ಅವರ ಅವರ ಪಾಪದಲ್ಲಿ ನಾವುಗಳೂ ಭಾಗಿಗಳಾಗುತ್ತೇವೆಯೇ ಹೊರತು ಯಾವ ಪುಣ್ಯವೂ ಇಲ್ಲ ಸುಖವೂ ಇಲ್ಲ. ದೇಹಿ ಎಂದವರಿಗೆ ನಾಸ್ತಿ ಎನ್ನಬಾರದು ನಿಜ ಆದರೆ ದೇಹಿ ಅಂದವನು ಎಂಥವನು ಎಂದು ನೋಡಬೇಡವೇ?
ಭಯೋತ್ಪಾದಕನೊಬ್ಬ ಕೇಳಿದನೆಂದ ಆಶ್ರಯ ನೀಡಿದರೆ ಅದು ಪುಣ್ಯಕಾರ್ಯ ಹೇಗಾದೀತು?
ನೀಡುವವನು ಅದರ ಸದ್ವಿನಿಯೋಗ ಆಗುತ್ತದೆಯೇ ಎಂಬುದನ್ನು ಗಮನಿಸಬೇಕು. ಆಗಲೇ ಆ ದಾನಕ್ಕೊಂದು ಬೆಲೆ.
No comments:
Post a Comment