Saturday 2 February 2019

ಸುಭಾಷಿತ ೧೫

 ಯೇ ಚ ಮೂಢತಮಾ ಲೋಕೇ ಯೇ ಚ ಬುದ್ಧೇಃ ಪರಂ ಗತಾಃ।
  ತ ಏವ ಸುಖಮೇಧಂತೇ ಮಧ್ಯಮಃ ಕ್ಲಿಶ್ಯತೇ ಜನಃ॥

ಅನ್ವಯ ಅರ್ಥ:

ಯೇ (ಯಾರು)
 ಲೋಕೇ (ಲೋಕದಲ್ಲಿ)
 ಮೂಢತಮಾಃ(ಎನಗೂ ಅರಿಯದವರೋ)
 ಚ (ಮತ್ತು)
 ಯೇ (ಯಾರು)
 ಬುದ್ಧೇಃ (ಜ್ಞಾನದ)
 ಪರಂ ಗತಾಃ(ಪಾರಮ್ಯವನ್ನು ಹೊಂದಿರುವರೋ)
 ತೇ ಏವ (ಅವರೇ)
 ಸುಖಂ (ಸುಖವನ್ನು)
 ಏಧಂತೇ(ಹೊಂದುತ್ತಾರೆ).
 ಮಧ್ಯಮಃ ಜನಃ(ಉಳಿದ ಮಧ್ಯಮ ಜ್ಞಾನದ ಜನರು) ಕ್ಲಿಶ್ಯತೇ(ಕ್ಲೇಶವನ್ನು ಹೊಂದುತ್ತಾರೆ)
   

ಭಾವಾರ್ಥ:


      ಏನೂ ಅರಿಯದವನಿಗೆ ಸಂಶಯವಿಲ್ಲ, ಎಲ್ಲವನ್ನೂ ತಿಳಿದವನಿಗೂ ಸಂಶಯವಿಲ್ಲ, ಸಂಶಯವಿದ್ದಲ್ಲಿ ನಂಬಿಕೆಗೆ ಎಡೆ ಇಲ್ಲ, ಸಂಶಯ ಇಲ್ಲದಲ್ಲಿ ನಂಬಿಕೆ ಇದೆ. ನಂಬಿಕೆ ಇದ್ದಲ್ಲಿ ಸುಖವಿದೆ.
       
 ಅಲ್ಪ ಸ್ವಲ್ಪ ತಿಳಿದುಕೊಂಡವನು ಇತರರನ್ನು ನಂಬಲಾರ, ತಾನಾಗಿ ಮಾಡಬಲ್ಲೆನೆಂಬ ವಿಶ್ವಾಸವೂ ಇಲ್ಲ. ಎಲ್ಲಾ ಕಡೆಯೂ ಸಂಶಯವೇ. ಅಂಥವರು ಸದಾ ಕಷ್ಟಕ್ಕೆ ಒಳಗಾಗುತ್ತಾ ಇರುತ್ತಾರೆ.
     
ಕಗ್ಗದ ಕವಿ ಹೇಳುವಂತೆ ನಂಬದ ಹಿರಣ್ಯಕಶಿಪುವಿಗೂ ಮೋಕ್ಷ ಸಿಕ್ಕಿತು, ನಂಬಿದ ಪ್ರಹ್ಲಾದನಿಗೂ ಭಗವದ್ದರ್ಶನವಾಯಿತು. ಆದರೆ ಪೂರ್ಣವಾಗಿ ನಂಬಲಾರದೆ ನಂಬಿಕೆಯನ್ನೂ ಬಿಡಲಾರದೆ ಸಿಂಬಳದಲ್ಲಿ ಸಿಕ್ಕಿಕೊಂಡ ನೊಣದಂತೆ ಒದ್ದಾಡುವವರಿಗೆ ಎಂದಿಗೂ ಸುಖವಿಲ್ಲ.

No comments:

Post a Comment