ಸುಭಾಷಿತ ೨೨
ಗತೇಽಪಿ ವಯಸಿ ಗ್ರಾಹ್ಯಾ ವಿದ್ಯಾ ಸರ್ವಾತ್ಮನಾ ಬುಧೈಃ।
ಯದಿ ವಾ ನ ಫಲದಾ ಸ್ಯಾತ್ಸುಲಭಾ ಸ್ಯಾದನ್ಯಜನ್ಮನಿ।।
ಅನ್ವಯ ಅರ್ಥ:
ವಯಸಿ ಗತೇ ಅಪಿ(ಪ್ರಾಯಶಃ ಸಂದಿದ್ದರೂ)
ಬುಧೈಃ(ಬುದ್ಧಿವಂತರಿಂದ)
ಸರ್ವಾತ್ಮನಾ(ಸರ್ವಥಾ))
ವಿದ್ಯಾ ಗ್ರಾಹ್ಯಾ(ವಿದ್ಯೆಯು ಸಂಗ್ರಹಿಸಲ್ಪಡಬೇಕು)
ಯದಿ ವಾ (ಅದ್ಯ) ನ ಫಲದಾ ಸ್ಯಾತ್(ಒಂದು ವೇಳೆ ಇಂದು ಫಲಸಿಗೇಹೋದರೂ)
ಅನ್ಯ ಜನ್ಮನಿ(ಅನ್ಯ ಜನ್ಮನಿ(ಮುಂದಿನ ಜನ್ಮದಲ್ಲಿ)
ಸುಲಭಾ ಸ್ಯಾತ್। (ಸುಲಭವಾದೀತು)
ಭಾವಾರ್ಥ:*
ವಿದ್ಯೆಯು ಕಲಿತು ಮುಗಿಯುವಂಥದ್ದಲ್ಲ. ಮದಿವಯಸ್ಸಿನಲ್ಲಿಯೂ ಅಧ್ಯಯನ ಅಥವಾ ಹೊಸ ವಿಷಯಗಳನ್ನು ತಿಳಿಯುವ ಆತುರ ಇರುವವನು ಪ್ರಾಜ್ಞ. ಇನ್ನು ಈ ಪ್ರಾಯದಲ್ಲಿ ನಾನೇಕೆ ಕಲಿಯಲಿ? ಸುಮ್ಮನೆ ವಯಸ್ಸಾದ ಮೇಲೆ ಓದು ವ್ಯರ್ಥ ಎಂಬ ಭಾವನೆ ತಪ್ಪು. ಕಲಿತುದು ಈ ಜನ್ಮದಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ಜನ್ಮಾಂತರದಲ್ಲಿ ಖಂಡಿತಾ ಪ್ರಯೋಜನವಾದೀತು. ವೃದ್ಧಾಪ್ಯ ಶರೀರಕ್ಕೇ ಹೊರತು ಆತ್ಮಕ್ಕಲ್ಲ.
ಭಗವದ್ಗೀತೆಯಲ್ಲಿ ಕೃಷ್ಣ ಹೇಳುವಂತೆ
ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್। ಪೂರ್ವದೇಹದ ಬುದ್ಧಿಸಂಯೋಗ ಮತ್ತಿನ ಜನ್ಮದಲ್ಲಿ ಆಗಿಯೇ ಆಗುವುದು. ಸರಿಯಾಗಿ ಮತನಾಡಲೂ ಅರಿಯದ ಮಕ್ಕಳಲ್ಲೂ ನಮ್ಮ ಕಲ್ಪನೆಗೂ ಮೀರಿದ ಪ್ರತಿಭೆ ಇರುವುದನ್ನು ಕಾಣುತ್ತೇವೆ. ಕಾರಣ ಪೌರ್ವದೇಹಿಕ ಬುದ್ಧಿಸಂಯೋಗವೇ. ಆದ ಕಾರಣ ಕೊನೆಯ ಉಸಿರಿನ ವರೆಗೂ ವಿದ್ಯೆ ಅನ್ವೇಷಣೆ ಅಧ್ಯಯನ ಮಾಡಲೇ ಬೇಕು.
ಗತೇಽಪಿ ವಯಸಿ ಗ್ರಾಹ್ಯಾ ವಿದ್ಯಾ ಸರ್ವಾತ್ಮನಾ ಬುಧೈಃ।
ಯದಿ ವಾ ನ ಫಲದಾ ಸ್ಯಾತ್ಸುಲಭಾ ಸ್ಯಾದನ್ಯಜನ್ಮನಿ।।
ಅನ್ವಯ ಅರ್ಥ:
ವಯಸಿ ಗತೇ ಅಪಿ(ಪ್ರಾಯಶಃ ಸಂದಿದ್ದರೂ)
ಬುಧೈಃ(ಬುದ್ಧಿವಂತರಿಂದ)
ಸರ್ವಾತ್ಮನಾ(ಸರ್ವಥಾ))
ವಿದ್ಯಾ ಗ್ರಾಹ್ಯಾ(ವಿದ್ಯೆಯು ಸಂಗ್ರಹಿಸಲ್ಪಡಬೇಕು)
ಯದಿ ವಾ (ಅದ್ಯ) ನ ಫಲದಾ ಸ್ಯಾತ್(ಒಂದು ವೇಳೆ ಇಂದು ಫಲಸಿಗೇಹೋದರೂ)
ಅನ್ಯ ಜನ್ಮನಿ(ಅನ್ಯ ಜನ್ಮನಿ(ಮುಂದಿನ ಜನ್ಮದಲ್ಲಿ)
ಸುಲಭಾ ಸ್ಯಾತ್। (ಸುಲಭವಾದೀತು)
ಭಾವಾರ್ಥ:*
ವಿದ್ಯೆಯು ಕಲಿತು ಮುಗಿಯುವಂಥದ್ದಲ್ಲ. ಮದಿವಯಸ್ಸಿನಲ್ಲಿಯೂ ಅಧ್ಯಯನ ಅಥವಾ ಹೊಸ ವಿಷಯಗಳನ್ನು ತಿಳಿಯುವ ಆತುರ ಇರುವವನು ಪ್ರಾಜ್ಞ. ಇನ್ನು ಈ ಪ್ರಾಯದಲ್ಲಿ ನಾನೇಕೆ ಕಲಿಯಲಿ? ಸುಮ್ಮನೆ ವಯಸ್ಸಾದ ಮೇಲೆ ಓದು ವ್ಯರ್ಥ ಎಂಬ ಭಾವನೆ ತಪ್ಪು. ಕಲಿತುದು ಈ ಜನ್ಮದಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ಜನ್ಮಾಂತರದಲ್ಲಿ ಖಂಡಿತಾ ಪ್ರಯೋಜನವಾದೀತು. ವೃದ್ಧಾಪ್ಯ ಶರೀರಕ್ಕೇ ಹೊರತು ಆತ್ಮಕ್ಕಲ್ಲ.
ಭಗವದ್ಗೀತೆಯಲ್ಲಿ ಕೃಷ್ಣ ಹೇಳುವಂತೆ
ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್। ಪೂರ್ವದೇಹದ ಬುದ್ಧಿಸಂಯೋಗ ಮತ್ತಿನ ಜನ್ಮದಲ್ಲಿ ಆಗಿಯೇ ಆಗುವುದು. ಸರಿಯಾಗಿ ಮತನಾಡಲೂ ಅರಿಯದ ಮಕ್ಕಳಲ್ಲೂ ನಮ್ಮ ಕಲ್ಪನೆಗೂ ಮೀರಿದ ಪ್ರತಿಭೆ ಇರುವುದನ್ನು ಕಾಣುತ್ತೇವೆ. ಕಾರಣ ಪೌರ್ವದೇಹಿಕ ಬುದ್ಧಿಸಂಯೋಗವೇ. ಆದ ಕಾರಣ ಕೊನೆಯ ಉಸಿರಿನ ವರೆಗೂ ವಿದ್ಯೆ ಅನ್ವೇಷಣೆ ಅಧ್ಯಯನ ಮಾಡಲೇ ಬೇಕು.
No comments:
Post a Comment