Monday 18 February 2019

ಸುಭಾಷಿತ - ೩೯:


ಅಧೋಽಧಃ ಪಶ್ಯತಃ ಕಸ್ಯ ಮಹಿಮಾ ನೋಪಚೀಯತೇ।ಉಪರ್ಯುಪರಿ ಪಶ್ಯತಶ್ಚೈವ ಸರ್ವ ಏವ ದರಿದ್ರತಿ।।

 ಅನ್ವಯಾರ್ಥ:


 ಅಧಃ ಅಧಃ ಪಶ್ಯತಃ(ಕೆಳ ಕೆಳಕ್ಕೆ ನೋಡುವ)
 ಕಸ್ಯ (ಯಾವನ)
 ಮಹಿಮಾ(ಮಹತ್ತ್ವವು)
 ನ ಉಪಚೀಯತೇ (ವೃದ್ಧಿಯಾಗುವುದಿಲ್ಲ?)
 ಉಪರಿ ಉಪರಿ(ಮೇಲೆ ಮೇಲೆಯೇ)
 ಪಶ್ಯತಃ (ನೋಡುವವನ)
 ಸರ್ವೇ ಏವ(ಎಲ್ಲವೂ)
 ದರಿದ್ರತಿ(ದುರ್ಗತಿ ಹೊಂದುತ್ತವೆ)



ಭಾವಾರ್ಥ:

ನೆಲವನ್ನು ನೋಡುವವ ನೇರವಾಗಿ ನಡೆಯುತ್ತಾನೆ. ಆಕಾಶವನ್ನು ನೋಡುವವ ಬೀಳದಿರಲಾರ. ದಿನವಿಡೀ ದುಡಿಯುವ ಬಡವ ಇರುವ ಸಂಪಾದನೆಗೆ ತಕ್ಕಂತೆ ತೃಪ್ತಿಯಿಂದ ಬದುಕುತ್ತಾನೆ. ಸಂಪತ್ತು ಬಂದಂತೆಲ್ಲ ಚಿಂತೆ ಜೊತೆಯಲ್ಲೇ ಬರುತ್ತದೆ. ತನಗಿಂತ ಕಡಿಮೆ ಸಂಪತ್ತಿರುವರನ್ನೇ ನೋಡುತ್ತಿದ್ದರೆ ತನ್ನಲ್ಲಿರುವುದೇ ಹೆಚ್ಚು ಎನಿಸುತ್ತದೆ. ಆಗ ಅಪೇಕ್ಷೆಗಳೂ ಮಿತಿಯಲ್ಲೇ ಇರುತ್ತವೆ. ತಾನಾಗಿಯೇ ತೃಪ್ತಿ ಸಿಗುತ್ತದೆ. ಎಲ್ಲವೂ ಅಷ್ಟೇ. ನಮ್ಮ ಅಳವಿಗೆ ಬರುವುದು ಅಲ್ಪ. ಹೊರಗಿರುವುದು ಅನಂತ. ಆ ಅನಂತವನ್ನು ಬಯಸುವವನಿಗೆ ತೃಪ್ತಿ ಎಲ್ಲಿಂದ? ಅಂಥವನು ಎಷ್ಟು ಸಂಪಾಸಿದರೂ ದರಿದ್ರನೇ. ಒಂದು ಮಗುವಿಗೆ ಒಂದು ರೂಪಾಯಿ ಸಿಕ್ಕಾಗ ಎಷ್ಟು ಸಂತೋಷಪಡುತ್ತದೆ! ಅದುವೇ ದೊಡ್ಡದು ಅದಕ್ಕೆ. ದೊಡ್ಡದರ  ಆ ಸಂತೋಷ ಕೋಟಿಧನವಿದ್ದರೂ ಸಿಗದು. ಒಂದಿದ್ದರೆ ಎರಡು ಬೇಕು, ಎರಡಿದ್ದರೆ ನಾಲ್ಕು!! ಆಸೆಗಳು ಮೇಲೆ ಮೇಲೆಯೇ ಹೋಗುತ್ತಾ ಇದ್ದರೆ ಇರುವುದನ್ನು ಅನಭವಿಸುವ ಸಂತೋಷ ನಷ್ಟವಾಗಿ ಇಲ್ಲದುದರ ಬಗೆಗಿನ ಕೊರಗೇ ಉಳಿಯುತ್ತದೆ.

No comments:

Post a Comment