Friday 15 February 2019

ಸುಭಾಷಿತ - ೩೧


ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ।
ಅಭಿರೂಪ್ಯಾಚ್ಚ ಮೂರ್ತೀನಾಂ ದೇವಃ ಸಾನ್ನಿಧ್ಯಮೃಚ್ಛತಿ।।


ಅನ್ವಯ ಅರ್ಥ:

 ಅರ್ಚಕಸ್ಯ(ಪೂಜಿಸುವವನ)
 ಪ್ರಭಾವೇನ(ಪ್ರಭಾವದಿಂದ)
 ಶಿಲಾ(ಶಿಲೆಯು)
 ಶಂಕರಃ ಭವತಿ(ದೇವರಾಗುತ್ತದೆ)
 ಮೂರ್ತೀನಾಂ (ಮೂರ್ತಿಗಳ)(ಲ್ಲಿ) ಅಭಿರೂಪ್ಯಾತ್(ರೂಪದರ್ಶನದಿಂದ)
 (ತತ್ರ/ಅಲ್ಲಿ)
 ದೇವಃ(ದೇವರು)
 ಸಾನ್ನಿಧ್ಯಂ(ಸಾನ್ನಿಧ್ಯವನ್ನು)
 ಋಚ್ಛತಿ(ಹೊಂದುತ್ತಾನೆ)


ಭಾವಾರ್ಥ:

 ಅರ್ಚಿಸುವವನ ಪ್ರಭಾವದಿಂದ ಕಲ್ಲೂ ಕೂಡಾ ದೇವತ್ವವನ್ನು ಹೊಂದುತ್ತದೆ. ಆ ಕಲ್ಲಿನಲ್ಲಿ, ಕಲ್ಲಿನ ಮೂರ್ತಿಯಲ್ಲಿ ದೇವರನ್ನು ಭಾವಿಸಿದಾಗ ಭಗವಂತನ ಅಲ್ಲಿ ಸಾನ್ನಿಧ್ಯವನ್ನು ಹೊಂದುತ್ತಾನೆ. ಅದು ಕಲ್ಲು ಎಂಬ ಭಾವ ಮನಸ್ಸಿನಲ್ಲಿದ್ದರೆ ಕೇವಲ ಕಲ್ಲಾಗಿಯೇ ಉಳಿದೀತು.
 ಅರಣಿಯಲ್ಲಿ ಬೆಂಕಿ ಇರುವುದು ಮೇಲ್ನೋಟಕ್ಕೆ ಕಾಣಿಸದು. ಅರಿತವನಷ್ಟೇ ಅದನ್ನು ಕಾಣಬಲ್ಲ, ಅದರಿಂದ ಬೆಂಕಿಯನ್ನು ಪಡೆಯಬಲ್ಲ. ಉಳಿದವರಿಗೆ ಅದು ಕೇವಲ ಮರದ ಕೊರಡು. ಅದೇ ರೀತಿ ಭಗವಂತನ ರೂಪ ಮೊದಲು ಮನದಲ್ಲಿ ಉದಿಸಬೇಕು. ಆ ರೂಪವನ್ನು ಆ ಮೂರ್ತಿಯಲ್ಲಿ ಕಾಣಬೇಕು,ಅಲ್ಲಿ ಸ್ಥಾಪಿಸಬೇಕು. ಆಗ ಭಗವಂತನ ಸಾನ್ನಿಧ್ಯ ಅಲ್ಲಿ ಆಗುವುದು. ತನ್ನಲ್ಲೇ, ತನ್ನ ಮನಸ್ಸಿನಲ್ಲೇ ಇಲ್ಲದಿರುವುದನ್ನು ಅಲ್ಲಿ ಕಾಣಲು ಹೇಗೆ ಸಾಧ್ಯ? ಆದ್ದರಿಂದ ಅರ್ಚಿಸುವವನ ಭಾವ ಪ್ರಕರ್ಷವಾಗಿ ಹೊಮ್ಮಿ ಆ ಭಾವ ಮೂರ್ತಿಯಲ್ಲಿ ಬಂದಾಗ ಆ ಶಿಲೆಯೇ ಶಂಕರನಾಗಿ ಪ್ರಕಟವಾಗುತ್ತದೆ.


ಅವರವರ ಭಾವಕ್ಕೆ ಅವರವರ ಬಕುತಿಗೆ ಅವರವರ ತೆರನಾಗಿ ಇರುತಿಹನು ಶಿವಯೋಗಿ

No comments:

Post a Comment