Wednesday 20 February 2019

    ಸುಭಾಷಿತ - ೪೦:


ಅನಿರ್ವೇದಮಸಿದ್ಧೇಷು ಸಾಧಿತೇಷ್ವನಹಂಕೃತಿಮ್।
ಅನಾಲಸ್ಯಂ ಚ ಸಾಧ್ಯೇಷು ಕೃತ್ಯೇಷ್ವನುಗೃಹಾಣ ಮೇ॥



   ಅನ್ವಯಾರ್ಥ:


 ಅಸಿದ್ಧೇಷು(ಸಾಧಿಸಲಾಗದಿದ್ದಲ್ಲಿ)
 ಅನಿರ್ವೇದಂ(ಖೇದವಿಲ್ಲದಂತೆ)
 ಸಾಧಿತೇಷು(ಸಾಧಿಸಿದಲ್ಲಿ)
 ಅನಹಂಕೃತಿಃ(ಅಹಂಕಾರವಿಲ್ಲದಂತೆ) ಸಾಧ್ಯೇಷು(ಸಾಧಿಸಲಾಗುವ)
 ಕೃತ್ಯೇಷು(ಕೆಲಸಗಳಲ್ಲಿ)
 ಅನಾಲಸ್ಯಂ (ಆಲಸ್ಯವಿರದಂತೆಯೂ)
 ಮೇ (ನನಗೆ)
 ಅನುಗೃಹಾಣ(ಅನುಗ್ರಹ ಮಾಡು).



      ಭಾವಾರ್ಥ:


     ಪ್ರಯತ್ನ ಮಾಡಿಯೂ ನಿರೀಕ್ಷಿತ ಫಲ ದೊರೆಯದೇ ಹೋದರೆ ಅದರಲ್ಲಿ ನಮ್ಮ ತಪ್ಪೇನಿದೆ? ಅದಕ್ಕಾಗಿ ಖೇದ ಪಡುವುದು ಅನವಶ್ಯಕ. ಕರ್ತವ್ಯವನ್ನು ಮಾಡಿ ಫಲಾಫಲದ ಚಿಂತೆಯನ್ನು ಭಗವಂತನಿಗೇ ಬಿಡೋಣ. ಮುಂದೊಂದು ದಿನ ಕಾರ್ಯಸಾಧನೆ ಆಗುವುದು ಖಚಿತ.

     ಸಾಧಿಸಿದ ಕಾರ್ಯದ ಬಗ್ಗೆ ಜಂಭ ಬೇಡ. ಕರ್ಮ ಮಾತ್ರ ನಮ್ಮದು ಫಲಾಫಲ ಭಗವಂತನದು ತಾನೇ! ಕಾರ್ಯಸಾಧನೆಗೆ ಕಾರಣ ಭಗವಂತನಾಗಿರುವಾಗ ಜಂಭ ಪಡಲು ನಮ್ಮದೇನಿದೆ?

 ಸಾಧಿಸಬಹುದಾದ ಕೆಲಸಗಳಲ್ಲಿ ಆಲಸ್ಯ ಸಲ್ಲದು. ಆಲಸ್ಯವೆಂಬುದು ಮನುಷ್ಯನಿಗೆ ಶರೀರದೊಳಗೇ ಇದ್ದು ದ್ರೋಹ ಮಾಡುವ ಶತ್ರು. ಅದೃಷ್ಟದ ಲಾಭ ಆಲಸಿಗೆ ಎಂದೂ ಸಿಗದು.

    ಆದ್ದರಿಂದ ಭಗವಂತನಲ್ಲಿ ಪ್ರಾರ್ಥನೆ ಇಷ್ಟೇ: ಸಾಧಿಸಲಾಗದಿದ್ದಲ್ಲಿ ಖೇದಪಡದಂತೆ ಸಾಧಿಸಿದಾಗ ಅಹಂಕಾರ ಬರದಂತೆ ಸಾಧಿಸುವಲ್ಲಿ ಆಲಸ್ಯಂ ಬರದಂತೆ ಬುದ್ಧಿ ಕೊಡು ಪರಮಾತ್ಮಾ!!

No comments:

Post a Comment