Friday 15 February 2019

    ಸುಭಾಷಿತ - ೨೯


 ವಿಧೌ ವಿರುದ್ಧೇ ನ ಪಯಃ ಪಯೋನಿಧೌ।
 ಸುಧೌಘಸಿಂಧೌ ನ ಸುಧಾ ಸುಧಾಕರೇ।।
 ನ ವಾಂಛಿತಂ ಸಿಧ್ಯತಿ ಕಲ್ಪಪಾದಪೇ।
 ನ ಹೇಮ ಹೇಮಪ್ರಭವೇ ಗಿರಾವಪಿ।।


ಅನ್ವಯ ಅರ್ಥ:

 ವಿಧೌ ವಿರುದ್ಧೇ (ಸತಿ)(ವಿಧಿಯು ತಿರುಗಿಬಿದ್ದರೆ) ಪಯೋನಿಧೌ(ಅಪಿ)(ಸಮುದ್ರದಲ್ಲೂ)
 ನ ಪಯಃ(ನೀರಿರದು).
 ಸುಧೌಘಸಿಂಧೌ(ಅಮೃತಪ್ರವಾಹದ ಸಾಗರವೇ ಆದ)
 ಸುಧಾಕರೇ (ಚಂದ್ರನಲ್ಲೂ)
 ನ ಸುಧಾ(ಅಮೃತವಿರದು)
 ಕಲ್ಪಪಾದಪೇ(ಅಪಿ)(ಕಲ್ಪವೃಕ್ಷದಲ್ಲೂ)   ವಾಂಛಿತಂ(ಇಷ್ಟಪಟ್ಟದ್ದನ್ನು)
 ನ ಸಿಧ್ಯತಿ(ಪಡೆಯಲಾಗದು)
 ಹೇಮಪ್ರಭವೇ(ಬಂಗಾರವನ್ನು ಸುರಿಸುವ)
 ಗಿರೌ ಅಪಿ(ಪರ್ವತದಲ್ಲೂ)
 ನ ಹೇಮ (ಲಭತೇ)(ಬಂಗಾರವನ್ನು ಪಡೆಯಲಾಗದು)


ಭಾವಾರ್ಥ:

 ವಿಧಿಲಿಖಿತವನ್ನು ಬದಲಿಸುವುದು ಅಸಾಧ್ಯ. ಪಾಪಿ ಹೋದಲ್ಲಿ ಮೊಣಕಾಲು ನೀರು ಎಂಬ ಗಾದೆಯಿದೆ. ವಿಧಿ ತಿರುಗಿ ಬಿದ್ದರೆ ಸಮುದ್ರವೂ ಆರಿಹೋದೀತು. ಸುಧಾಮಯನೂ ಅಮೃತಾತ್ಮಕನೂ ಆದ ಚಂದ್ರನಲ್ಲೂ ಅಮೃತ ಸಿಗದು. ಕಲ್ಪವೃಕ್ಷವನ್ನೇ ಬೇಡಿದರೂ ಬೇಕಾದ್ದು ಸಿಗದು. ಸ್ವರ್ಣಪರ್ವತಕ್ಕೇ ಹೋದರೂ ತುಂಡು ಚಿನ್ನವೂ ಸಿಗಲಾರದು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಬದಲು ಸಲ್ಲದ ಮಹತ್ವಾಕಾಂಕ್ಷೆಗಳನ್ನು ತೊರೆದು ಹಾಸಿಗೆ ಇದ್ದಷ್ಟು ಕಾಲು ಚಾಚಿ ನೆಮ್ಮದಿಯಿಂದ ಇರುವುದು ಲೇಸು.

No comments:

Post a Comment