ಸುಭಾಷಿತ ೪೫
ಸುಶ್ರಾಂತೋಽಪಿ ವಹೇದ್ಭಾರಂ ಶೀತೋಷ್ಣಂ ಚ ನ ಪಶ್ಯತಿ। ಸಂತುಷ್ಟಶ್ಚರತೇ ನಿತ್ಯಂ ತ್ರೀಣಿ ಶಿಕ್ಷೇಚ್ಚ ಗರ್ದಭಾತ್॥
ಅನ್ವಯ ಅರ್ಥ:
ಸುಶ್ರಾಂತಃ ಅಪಿ(ಸಾಕಷ್ಟು ಆಯಾಸಗೊಂಡಿದ್ದರೂ)
ಭಾರಂ (ಭಾರವನ್ನು)
ವಹೇತ್ (ಹೊರುವುದು)
ಶೀತೋಷ್ಣಂ ಚ (ಚಳಿಸೆಖೆಯನ್ನೂ)
ನ ಪಶ್ಯತಿ (ಗಮನಿಸುವುದಿಲ್ಲ)
ನಿತ್ಯಂ (ಯಾವಾಗಲೂ)
ಸಂತುಷ್ಟಃ ಚರತಿ)
(ಸಂತೋಷದಿಂದ ಸುತ್ತಾಡುತ್ತದೆ)
ತ್ರೀಣಿ(ಈ ಮೂರು ಗುಣಗಳನ್ನು)
ಗರ್ದಭಾತ್(ಕತ್ತೆಯಿಂದ)
ಶಿಕ್ಷೇತ್(ಕಲಿಯಬೇಕು)
ಭಾವಾರ್ಥ:
ಏನೂ ಅರಿಯದ ಮೂರ್ಖನನ್ನು ಕತ್ತೆಗೆ ಹೋಲಿಸುತ್ತಾರೆ. ಆದರೆ ಕಲಿಯುವ ಗುಣವಿದ್ದರೆ ಕತ್ತೆಯಿಂದಲೂ ಕಲಿಯುವುದಿದೆ. ಎಷ್ಟು ಆಯಾಸಗೊಂಡಿದ್ದರೂ ಕತ್ತೆ ಭಾರವನ್ನು ಹೊರದೆ ಇರುವುದಿಲ್ಲ. ಬಿಸಿಲು ಮಳೆ ಚಳಿ ಗಾಳಿ ಏನೇ ಇದ್ದರೂ ತನ್ನ ಕೆಲಸ ಮಾಡುತ್ತಲೇ ಇರುತ್ತದೆ. ಬೇಸರವೆಂಬುದು ಇಲ್ಲವೇ ಇಲ್ಲವೇನೋ! ಈ ಮೂರೂ ಗುಣಗಳು ಕತ್ತೆಯದೇ ಆದರೂ ಖಂಡಿತವಾಗಿಯೂ ಅನುಸರಣೀಯ.
ಎಷ್ಟು ಆಯಾಸಗೊಂಡಿದ್ದರೂ ಒಪ್ಪಿಕೊಂಡ ಜವಾಬ್ದಾರಿಯಿಂದ ಹಿಂಜರಿಯುವಂತಿಲ್ಲ. ಎಂತಹ ಅಡೆತಡೆಗಳು ಬಂದರೂ ಅದನ್ನು ಪೂರೈಸುವ ದೃಢಚಿತ್ತವಿರಬೇಕು. ಕಷ್ಟ ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಭೇದವಿಲ್ಲದೆ ಜವಾಬ್ದಾರಿಯನ್ನು ನಿಭಾಯಿಸಬೇಕು. ಆಗ ಯಶಸ್ಸು ನಿಶ್ಚಯ.
ಸುಶ್ರಾಂತೋಽಪಿ ವಹೇದ್ಭಾರಂ ಶೀತೋಷ್ಣಂ ಚ ನ ಪಶ್ಯತಿ। ಸಂತುಷ್ಟಶ್ಚರತೇ ನಿತ್ಯಂ ತ್ರೀಣಿ ಶಿಕ್ಷೇಚ್ಚ ಗರ್ದಭಾತ್॥
ಅನ್ವಯ ಅರ್ಥ:
ಸುಶ್ರಾಂತಃ ಅಪಿ(ಸಾಕಷ್ಟು ಆಯಾಸಗೊಂಡಿದ್ದರೂ)
ಭಾರಂ (ಭಾರವನ್ನು)
ವಹೇತ್ (ಹೊರುವುದು)
ಶೀತೋಷ್ಣಂ ಚ (ಚಳಿಸೆಖೆಯನ್ನೂ)
ನ ಪಶ್ಯತಿ (ಗಮನಿಸುವುದಿಲ್ಲ)
ನಿತ್ಯಂ (ಯಾವಾಗಲೂ)
ಸಂತುಷ್ಟಃ ಚರತಿ)
(ಸಂತೋಷದಿಂದ ಸುತ್ತಾಡುತ್ತದೆ)
ತ್ರೀಣಿ(ಈ ಮೂರು ಗುಣಗಳನ್ನು)
ಗರ್ದಭಾತ್(ಕತ್ತೆಯಿಂದ)
ಶಿಕ್ಷೇತ್(ಕಲಿಯಬೇಕು)
ಭಾವಾರ್ಥ:
ಏನೂ ಅರಿಯದ ಮೂರ್ಖನನ್ನು ಕತ್ತೆಗೆ ಹೋಲಿಸುತ್ತಾರೆ. ಆದರೆ ಕಲಿಯುವ ಗುಣವಿದ್ದರೆ ಕತ್ತೆಯಿಂದಲೂ ಕಲಿಯುವುದಿದೆ. ಎಷ್ಟು ಆಯಾಸಗೊಂಡಿದ್ದರೂ ಕತ್ತೆ ಭಾರವನ್ನು ಹೊರದೆ ಇರುವುದಿಲ್ಲ. ಬಿಸಿಲು ಮಳೆ ಚಳಿ ಗಾಳಿ ಏನೇ ಇದ್ದರೂ ತನ್ನ ಕೆಲಸ ಮಾಡುತ್ತಲೇ ಇರುತ್ತದೆ. ಬೇಸರವೆಂಬುದು ಇಲ್ಲವೇ ಇಲ್ಲವೇನೋ! ಈ ಮೂರೂ ಗುಣಗಳು ಕತ್ತೆಯದೇ ಆದರೂ ಖಂಡಿತವಾಗಿಯೂ ಅನುಸರಣೀಯ.
ಎಷ್ಟು ಆಯಾಸಗೊಂಡಿದ್ದರೂ ಒಪ್ಪಿಕೊಂಡ ಜವಾಬ್ದಾರಿಯಿಂದ ಹಿಂಜರಿಯುವಂತಿಲ್ಲ. ಎಂತಹ ಅಡೆತಡೆಗಳು ಬಂದರೂ ಅದನ್ನು ಪೂರೈಸುವ ದೃಢಚಿತ್ತವಿರಬೇಕು. ಕಷ್ಟ ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ ಭೇದವಿಲ್ಲದೆ ಜವಾಬ್ದಾರಿಯನ್ನು ನಿಭಾಯಿಸಬೇಕು. ಆಗ ಯಶಸ್ಸು ನಿಶ್ಚಯ.
No comments:
Post a Comment