Friday 1 February 2019

ಸುಭಾಷಿತ - ೧೪


ಸಂರೋಹತ್ಯಗ್ನಿನಾ ದಗ್ಧಂ ವನಂ ಪರಶುನಾ ಹತಮ್।
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್ಕ್ಷತಮ್॥


ಅನ್ವಯ ಅರ್ಥ:

ಅಗ್ನಿನಾ ದಗ್ಧಂ (ಬೆಂಕಿಯಿಂದಾಗಿ ಉರಿದುಹೋದ)
 ಪರಶುನಾ ಹತಂ(ಕೊಡಲಿಯಿಂದ ನಾಶವಾದ)
 ವನಂ (ಕಾಡು)
 ಸಂರೋಹತಿ (ಪುನಃ ಬೆಳೆಯುತ್ತದೆ )
 ಬೀಭತ್ಸಂ(ಕ್ರೂರವಾಗಿ)
 ವಾಚಾ (ಮಾತಿನ ಮೂಲಕ)
 ದುರುಕ್ತಂ(ಕೆಟ್ಟದಾಗಿ ಆಡಿ ಮಾಡಿದ)
 ವಾಕ್ಕ್ಷತಂ(ಮಾತಿನ ಗಾಯವು) ನ ಸಂರೋಹತಿ(ಮಾಯುವುದಿಲ್ಲ).


ಭಾವಾರ್ಥ:

    ಬೆಂಕಿಯಿಂದಾಗಿ ಕಾಡಿಗೆ ಕಾಡೇ ಉರಿದು ಹೋದರೂ ಕಾಲಕ್ರಮೇಣ ಪುನಃ ಬೆಳೆಯಬಹುದು. ಕೊಡಲಿಯಿಂದ ಕಡಿದ ಮರಗಳೂ ಕಾಲಾಂತರದಲ್ಲಿ ಮತ್ತೆ ಚಿಗುರೊಡೆಯಬಹದು. ಮಾತಿನಿಂದ ಮನ ನೊಂದರೆ ಅದು ಮನಃಪಟಲದಿಂದ ಅಳಿಸಿಹೋಗದು. ಮೈಗೆ ಆದ ಗಾಯ ಮಾಯುತ್ತದೆ ಮನಸ್ಸಿನ ಗಾಯ ಶಾಶ್ವತವಾಗಿ ಉಳಿಯುತ್ತದೆ. ಆದುದರಿಂದ ಮಾತನಾಡುವಾಗ ಎಚ್ಚರ ವಹಿಸಬೇಕು. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು.

No comments:

Post a Comment