Friday 8 February 2019

ಸುಭಾಷಿತ ೨೩


ತಮಃ ಪರಿವೃತಂ ವೇಶ್ಮ ಯಥಾ ದೀಪೇನ ದೀಪ್ಯತೇ।
ತಥಾ ಬುದ್ಧಿಪ್ರದೀಪೇನ ಶಕ್ಯ ಆತ್ಮಾ ನಿರೀಕ್ಷಿತುಮ್॥


ಅನ್ವಯ ಅರ್ಥ:


 ತಮಃಪರಿವೃತಂ(ಕತ್ತಲಿನಿಂದ ಆವೃತವಾದ)
ವೇಶ್ಮ(ಮನೆಯು)
ದೀಪೇನ (ದೀಪದಿಂದ)
ದೀಪ್ಯತೇ(ಬೆಳಗಲ್ಪಡುತ್ತದೆ)
 ತಥಾ (ಹಾಗೆಯೇ)
 ಬುದ್ಧಿಪ್ರದೀಪೇನ(ಬುದ್ಧಿಯೆಂಬ ದೀಪದಿಂದ )
 ಆತ್ಮಾ ನಿರೀಕ್ಷತುಂ(ಆತ್ಮನಿರೀಕ್ಷಣೆ ಮಾಡಲು)
 ಶಕ್ಯಃ(ಸಾಧ್ಯವಿದೆ)


  ಭಾವಾರ್ಥ:

ಕತ್ತಲು ಎಷ್ಟು ಗಾಢವಾಗಿದ್ದರೂ ಸಣ್ಣದೊಂದು ದೀಪವು ಅದನ್ನು ಹೊಡೆದೋಡಿಸುತ್ತದೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಉರಿಸುತ್ತಾ ಕತ್ತಲಾವರಿಸಿದ ಇಡೀ ಮನೆಯನ್ನು ಬೆಳಗಿಸಿ ಬಿಡಬಹುದು. ಮೊದಲು ಕಿಡಿಯಿಂದ ದೀಪಬೆಳಗಿಸುವ ಪ್ರಯತ್ನ ಬೇಕು. ದೀಪವಿದ್ದರೆ ಕತ್ತಲು ಎಷ್ಟಿದ್ದರೂ ಗುರಿ ತಲುಪುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಹಾಗೆಯೇ ಶ್ರದ್ಧೆ ಮತ್ತು ಗುರುಭಕ್ತಿಗಳೆಂಬ ಎಣ್ಣೆ ಬತ್ತಿಗಳಿಂದ ಬುದ್ಧಿಯೆಂಬ ದೀಪವನ್ನು ಬೆಳಗಿಸಿ ಜ್ಞಾನವೆಂಬ ಬೆಳಕಿನಿಂದ ಮನಸ್ಸಿನ ಅಂಧಕಾರವನ್ನು ತೊಡೆಯಲು ಸಾಧ್ಯ, ಆತ್ಮಸಾಕ್ಷಾತ್ಕಾರವೂ ಸಾಧ್ಯ.

No comments:

Post a Comment