ಸುಭಾಷಿತ ೪೪
ಬಾಲಾದಪಿ ಗ್ರಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ। ರವೇರವಿಷಯೇ ಕಿಂ ನ ಪ್ರದೀಪಸ್ಯ ಪ್ರಕಾಶನಮ್॥
ಅನ್ವಯ ಅರ್ಥ:
(ಯದಿ)ಯುಕ್ತಂ ಉಕ್ತಂ(ಸರಿಯಾದುದನ್ನು ಹೇಳಿದರೆ) ಬಾಲಾತ್ ಅಪಿ(ಮಗುವಿನಿಂದಲೇ ಆದರೂ)
ಮನೀಷಿಭಿಃ (ಬುದ್ಧಿವಂತರಿಂದ)
ಗ್ರಹೀತವ್ಯಂ (ಸ್ವೀಕರಿಸಲ್ಪಡಬೇಕು)
ರವೇಃ(ಸೂರ್ಯನ)
ಅವಿಷಯೇ(ಅನುಪಸ್ಥಿತಿಯಲ್ಲಿ/ಅಗೋಚರದಲ್ಲಿ ) ಪ್ರದೀಪಸ್ಯ(ದೀಪದ)
ಕಿಂ ನ ಪ್ರಕಾಶನಮ್?(ಬೆಳಕೇ ಅಲ್ಲವೇ?)
ಭಾವಾರ್ಥ:
ಸತ್ಯಕ್ಕೆ ವಯಸ್ಸು ವಿದ್ವತ್ತು ಸಂಪತ್ತು ಜಾತಿ ಅಧಿಕಾರ ಯಾವುದೂ ತಡೆಯಾಗಲಾರದು. ಸರಿಯಾದ ಮಾತನ್ನು ಯಾರು ಹೇಳಿದರೂ ಅದು ಗ್ರಾಹ್ಯವೇ. ಬಾಲಕನೇ ಆಗಲೀ ವೃದ್ಧನೇ ಪಂಡಿತನಾಗಲೀ ಪಾಮರನಾಗಲೀ ಯುಕ್ತವು ಯುಕ್ತವು. ಆಪತ್ಕಾಲದಲ್ಲಿ ಹುಲ್ಲು ಕಡ್ಡಿಯೂ ಆಸರೆಯಾಗಬಹುದು. ಬಾಲಕನ ಮಾತೆಂದು ತೆಗೆದುಹಾಕುವಂತಿಲ್ಲ. ಸದಾ ಕಾಲವೂ ಸೂರ್ಯನ ಬೆಳಕೇ ಆಗಬೇಕೆಂದರೆ ಸರಿಯೇ? ಸೂರ್ಯನ ಅನುಪಸ್ಥಿತಿಯಲ್ಲಿ ದೀಪವೂ ದಾರಿ ತೋರುತ್ತದೆ. ಯುಕ್ತಾಯುಕ್ತವಿವೇಚನೆ ಇದ್ದರೆ ಅಣುವಿನಿಂದ ಸ್ಥಾಣುವಿನ ವರೆಗೂ ಪ್ರತಿಯೊಂದೂ ಮಾರ್ಗದರ್ಶಕಗಳೇ.
ಬಾಲಾದಪಿ ಗ್ರಹೀತವ್ಯಂ ಯುಕ್ತಮುಕ್ತಂ ಮನೀಷಿಭಿಃ। ರವೇರವಿಷಯೇ ಕಿಂ ನ ಪ್ರದೀಪಸ್ಯ ಪ್ರಕಾಶನಮ್॥
ಅನ್ವಯ ಅರ್ಥ:
(ಯದಿ)ಯುಕ್ತಂ ಉಕ್ತಂ(ಸರಿಯಾದುದನ್ನು ಹೇಳಿದರೆ) ಬಾಲಾತ್ ಅಪಿ(ಮಗುವಿನಿಂದಲೇ ಆದರೂ)
ಮನೀಷಿಭಿಃ (ಬುದ್ಧಿವಂತರಿಂದ)
ಗ್ರಹೀತವ್ಯಂ (ಸ್ವೀಕರಿಸಲ್ಪಡಬೇಕು)
ರವೇಃ(ಸೂರ್ಯನ)
ಅವಿಷಯೇ(ಅನುಪಸ್ಥಿತಿಯಲ್ಲಿ/ಅಗೋಚರದಲ್ಲಿ ) ಪ್ರದೀಪಸ್ಯ(ದೀಪದ)
ಕಿಂ ನ ಪ್ರಕಾಶನಮ್?(ಬೆಳಕೇ ಅಲ್ಲವೇ?)
ಭಾವಾರ್ಥ:
ಸತ್ಯಕ್ಕೆ ವಯಸ್ಸು ವಿದ್ವತ್ತು ಸಂಪತ್ತು ಜಾತಿ ಅಧಿಕಾರ ಯಾವುದೂ ತಡೆಯಾಗಲಾರದು. ಸರಿಯಾದ ಮಾತನ್ನು ಯಾರು ಹೇಳಿದರೂ ಅದು ಗ್ರಾಹ್ಯವೇ. ಬಾಲಕನೇ ಆಗಲೀ ವೃದ್ಧನೇ ಪಂಡಿತನಾಗಲೀ ಪಾಮರನಾಗಲೀ ಯುಕ್ತವು ಯುಕ್ತವು. ಆಪತ್ಕಾಲದಲ್ಲಿ ಹುಲ್ಲು ಕಡ್ಡಿಯೂ ಆಸರೆಯಾಗಬಹುದು. ಬಾಲಕನ ಮಾತೆಂದು ತೆಗೆದುಹಾಕುವಂತಿಲ್ಲ. ಸದಾ ಕಾಲವೂ ಸೂರ್ಯನ ಬೆಳಕೇ ಆಗಬೇಕೆಂದರೆ ಸರಿಯೇ? ಸೂರ್ಯನ ಅನುಪಸ್ಥಿತಿಯಲ್ಲಿ ದೀಪವೂ ದಾರಿ ತೋರುತ್ತದೆ. ಯುಕ್ತಾಯುಕ್ತವಿವೇಚನೆ ಇದ್ದರೆ ಅಣುವಿನಿಂದ ಸ್ಥಾಣುವಿನ ವರೆಗೂ ಪ್ರತಿಯೊಂದೂ ಮಾರ್ಗದರ್ಶಕಗಳೇ.
No comments:
Post a Comment