Wednesday 20 February 2019

    ಸುಭಾಷಿತ - ೪೩



ಮನೀಷಿಣಃ ಸಂತಿ ನ ತೇ ಹಿತೈಷಿಣಃ।
ಹಿತೈಷಿಣಃ ಸಂತಿ ನ ತೇ ಮನೀಷಿಣಃ।।
ಸುಹೃಚ್ಚ ವಿದ್ವಾನಪಿ ದುರ್ಲಭೋ ನೃಣಾಮ್।
ಯಥೌಷಧಂ ಸ್ವಾದು ಹಿತಂ ಚ ದುರ್ಲಭಮ್।।



ಅನ್ವಯಾರ್ಥ:

 ಮನೀಷಿಣಃ(ಬುದ್ಧಿವಂತರು)
 ಸಂತಿ(ಇದ್ದಾರೆ)
 (ತು ಆದರೆ)
 ತೇ (ಅವರು)
 ನ ಹಿತೈಷಿಣಃ (ಹಿತವನ್ನು ಬಯಸುವವರಲ್ಲ)   ಹಿತೈಷಿಣಃ(ಹಿತೈಷಿಗಳು)
 ಸಂತಿ(ಇದ್ದಾರೆ)
 (ಆದರೆ) ತೇ (ಅವರು)
 ನ ಮನೀಷಿಣಃ (ಬುದ್ಧಿವಂತರಲ್ಲ)
 ಯಥಾ (ಯಾವ ರೀತಿ)
 ಔಷಧಂ(ಔಷಧವು)
 ಸ್ವಾದು (ರುಚಿಕರವೂ)
 ಹಿತಂ ಚ (ಹಿತಕಾರಿಯೂ ಆದುದು) ದುರ್ಲಭಂ(ಸಿಗಲಾರದೋ)
 (ತಥಾ ಹಾಗೆಯೇ)
 ನೃಣಾಂ(ಜನರಿಗೆ)
 ಸುಹೃತ್ ಚ(ಒಳ್ಳೆಯ ಹೃದಯವಂತನೂ/ಗೆಳೆಯನೂ)
 ವಿದ್ವಾನ್ ಅಪಿ(ವಿದ್ವಾಂಸನೂ ಆದವನು) ದುರ್ಲಭಃ(ಸಿಗಲಾರನು)


   ಭಾವಾರ್ಥ:



 ತಿನ್ನಬೇಕು ಎನಿಸಿದ್ದು ಆರೋಗ್ಯಕ್ಕೆ ಹಿತವಲ್ಲ. ಹಿತವಾದ್ದು ತಿನ್ನಬೇಕು ಅನ್ನಿಸುವುದಿಲ್ಲ. ಔಷಧಿಯು ಎಂದಿಗೂ ರುಚಿಕರ ಆಗಿರದು. ಪ್ರಪಂಚದಲ್ಲಿ ಬುದ್ಧಿವಂತರು ಅನೇಕರು. ಆದರೆ ಲೋಕಹಿತಕ್ಕಾಗಿ ಬುದ್ಧಿ ಉಪಯೋಗಿಸುವವರು ಎಷ್ಟು ಮಂದಿ? ಹಣವಂತರು ಇನ್ನೂ ಒಂದಷ್ಟು ಸಂಗ್ರಹಿಸವವರೇ ಹೊರತು ಬಡವರ ಹಸಿವಿಗೆ ಸ್ಪಂದಿಸುವವರಲ್ಲ. ಬಡವನ ಹಸಿವು ಬಡವನಿಗಷ್ಟೇ ಅರಿವಾಗುವುದು. ಪಾಪ ಸಹಾಯ ಮಾಡುವ ಮನಸ್ಸು ಇದ್ದರೂ ಅವನು ಅಸಹಾಯಕ. ಎಷ್ಟೋ ಮಂದಿಗೆ ಚಿಕ್ಕಂದಿನಲ್ಲಿ ಕಷ್ಟದಲ್ಲಿ ಬೆಳೆವಾಗ ಹೊಟ್ಟೆಗಿಲ್ಲ. ಕಷ್ಟಪಟ್ಟು ದುಡಿದು ಸಾಕಷ್ಟು ಸಂಪಾದಿಸಿದಾಗ ಇದ್ದ ಬದ್ದ ಕಾಯಿಲೆಗಳು ಅಂಟಿಕೊಂಡು ಏನನ್ನೂ ತಿನ್ನುವ ಹಾಗಿಲ್ಲ. ಲೋಕವೇ ಹಾಗೇ ಎಲ್ಲಾ ವೈರುಧ್ಯಗಳ ಸಂತೆಯೇ. ಬುದ್ಧಿವಂತಿಕೆಯೂ ಇದ್ದು ಅದನ್ನು ಜಾರಿಗೊಳಿಸುವ ಸಂಪನ್ಮೂಲಗಳೂ ಇದ್ದು ಲೋಕಹಿತಕ್ಕಾಗಿ ಬಳಸುವವರು ಬಹಳ ವಿರಳ.

No comments:

Post a Comment