Thursday 7 February 2019

ಸುಭಾಷಿತ - ೧೯


ಉಭಯೋರ್ನಾಸ್ತಿ ಭೋಗೇಚ್ಛಾ ಪರಾರ್ಥಂ ಧನಸಂಚಯಃ। ಕೃಪಣೋದಾರಯೋಃ ಪಶ್ಯ ತಥಾಪಿ ಮಹದಂತರಮ್।।


ಅನ್ವಯ ಅರ್ಥ:

ಉಭಯೋಃ (ಇಬ್ಬರಿಗೂ)
 ಭೋಗೇಚ್ಛಾ ನ ಅಸ್ತಿ(ಭೋಗದ ಆಸೆಯಿಲ್ಲ)
 ಪಶ್ಯ (ನೋಡು)
ತಥಾ ಅಪಿ(ಹಾಗಾದರೂ)
 ಕೃಪಣೋದಾರಯೋಃ(ಜಿಪುಣ ಮತ್ತು ಉದಾರಿಯಲ್ಲಿ) ಮಹದಂತರಮ್ ಅಸ್ತಿ(ಬಹಳ ವ್ಯತ್ಯಾಸವಿದೆ)


ಭಾವಾರ್ಥ:

ಉದ್ದೇಶ ಏನು ಎಂಬುದರ ಮೇಲೆ ಕಾರ್ಯಕ್ಕೆ ಮಹತ್ವ ಬರುತ್ತದೆ. ಕಾರ್ಯ ಒಂದೇ ಆದರೂ ಉದ್ದೇಶ ಬೇರೆ ಬೇರೆ ಆದರೆ ಪರಾಣಾಮವೂ ಬೇರೆ ಬೇರೆಯೇ. ಉದಾರಿಯೂ ಧನಸಂಪಾದನೆ ಮಾಡುತ್ತಾನೆ, ಜಿಪುಣನೂ ಅದನ್ನೇ ಮಾಡುತ್ತಾನೆ. ಇಬ್ಬರಿಗೂ ಅದನ್ನು ಭೋಗಿಸುವ ಇಚ್ಛೆ ಇಲ್ಲ. ಆದರೆ ಅವರಿಬ್ಬರಲ್ಲಿ ಅಂತರವೆಷ್ಟು ನೋಡಿ! ಒಬ್ಬ ದಾನಕ್ಕಾಗಿ ಸಂಗ್ರಹಿಸುತ್ತಾನೆ, ಇನ್ನೊಬ್ಬ ಸಂಗ್ರಹಕ್ಕಾಗಿ ಸಂಗ್ರಹಿಸುತ್ತಾನೆ. ತನ್ನ ಸೌಖ್ಯವನ್ನು ಲೆಕ್ಕಿಸದೆ ದಾನಮಾಡುವವರು ಮಹಾತ್ಮರು. ದಧೀಚಿ ಶಿಬಿಯಂತೆ ಪರಾರ್ಥಕ್ಕಾಗಿ ಶರೀರವನ್ನೇ ದಾನಮಾಡಬಲ್ಲವರು. ತಾವೂ ಭೋಗಿಸುತ್ತಾ ಇತರರಿಗೂ ದಾನ ಮಾಡುತ್ತಾ ಅದರಿಂದ ಸುಖಪಡುವರು ಇನ್ನೊಂದು ವರ್ಗದವರು.
ದಾನಂ ಭೋಗೋ ನಾಶಸ್ತಿಸ್ರೋ ಗತಯೋ ಭವಂತಿ ವಿತ್ತಸ್ಯ।ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರ್ಭವತಿ॥

ಯಾರು ತಾವೂ ಭೋಗಿಸದೆ ಇತರರಿಗೂ ನೀಡದೆ ಸಂಗ್ರಹಮಾಡಿಡುವರೋ ಅವರ ಸಂಪತ್ತು ನಾಶವಾಗುತ್ತದೆ ಅಥವಾ ರಾಜರ, ತಸ್ಕರರ ವಶವಾಗುತ್ತದೆ

No comments:

Post a Comment