ಸುಭಾಷಿತ - ೧೮
ಹಸ್ತೀ ಸ್ಥೂಲತನುಃ ಸ ಚಾಂಕುಶವಶಃ ಕಿಂ ಹಸ್ತಿಮಾತ್ರೋಂಽಕುಶಃ।
ದೀಪೇ ಪ್ರಜ್ವಲಿತೇ ಪ್ರಣಶ್ಯತಿ ತಮಃ ಕಿಂ ದೀಪಮಾತ್ರೋ ತಮಃ।।
ವಜ್ರೇಣೈವ ಹತಾಃ ಪತಂತಿ ಗಿರಯಃ ಕಿಂ ವಜ್ರಮಾತ್ರೋ ಗಿರಿಃ।
ತೇಜೋ ಯಸ್ಯ ವಿರಾಜತೇ ಸ ಬಲವಾನ್ ಸ್ಥೂಲೇಷು ಕಃ ಪ್ರತ್ಯಯಃ।।
ಅನ್ವಯ ಅರ್ಥ:
ಹಸ್ತೀ (ಆನೆಯು)
ಸ್ಥೂಲತನುಃ(ಸ್ಥೂಲವಾದ್ದನ್ನು ಶರೀರವುಳ್ಳದ್ದು)
ಸಃ ಚ(ಅದೂ ಕೂಡಾ)
ಅಂಕುಶವಶಃ(ಅಂಕುಶದ ವಶದಲ್ಲಿದೆ)
ಅಂಕುಶಃ(ಅಂಕುಶವು)
ಹಸ್ತಿಮಾತ್ರಃ ಕಿಮ್?(ಆನೆಯ ಗಾತ್ರದ್ದೇನು?)
ದೀಪೇ ಪ್ರಜ್ವಲಿತೇ(ದೀಪ ಬೆಳಗಿದಾಗ)
ತಮಃ (ಕತ್ತಲೆಯು)
ಪ್ರಣಶ್ಯತಿ(ನಾಶವಾಗುತ್ತದೆ)
ತಮಃ(ಕತ್ತಲೆಯು)
ದೀಪಮಾತ್ರಃ ಕಿಮ್?(ದೀಪದಷ್ಟೇ ಗಾತ್ರದ್ದೇನು?)
ವಜ್ರೇಣ ಏವ(ವಜ್ರಾಯುಧದಿಂದಲೇ)
ಹತಾಃ (ಹೊಡೆಯಲ್ಪಟ್ಟ)
ಗಿರಯಃ (ಪರ್ವತಗಳು)
ಪತಂತಿ(ಉರುಳುತ್ತವೆ)
ಗಿರಿಃ(ಪರ್ವತವು)
ವಜ್ರಮಾತ್ರಃ(ವಜ್ರಾಯುಧದ ಗಾತ್ರದ್ದೇನು?)
ಯಸ್ಯ ತೇಜಃ(ಅಸ್ತಿ)(ಯಾರಲ್ಲಿ ತೇಜಸ್ಸು ಇದೆಯೋ) ಸಃ(ಅವನು)
ಬಲವಾನ್(ಶಕ್ತಿಶಾಲಿಯು)
ಸ್ಥೂಲೇಷು(ದಪ್ಪಗಿರುವವರಲ್ಲಿ)
ಕಃ ಪ್ರತ್ಯಯಃ (ಗುಣವೇನಿದೆ?)
ಭಾವಾರ್ಥ:
ಆತ್ಮಶಕ್ತಿ ಸಾಮರ್ಥ್ಯ ಇದ್ದರೆ ಗಾತ್ರದಿಂದ ಹೆಚ್ಚಿನ ಪ್ರಯೋಜನ ಏನೂ ಇಲ್ಲ. ಮಹಾನ್ ಗಾತ್ರದ ಆನೆಯನ್ನು ಹಿಡಿತಕ್ಕೆ ತರುವುದು ಪುಟ್ಟ ಅಂಕುಶ. ಆ ಅಂಕುಶವನ್ನು ಹಿಡಿದ ಮಾವುತನೂ ಆನೆಗೆ ಹೋಲಿಸಿದಾಗ ಪುಟ್ಟನೇ. ಕತ್ತಲು ಸುತ್ತಲೂ ಕವಿದಿದ್ದರೂ ಪುಟ್ಟ ದೀಪವು ಅದನ್ನು ಹೊಡೆದೋಡಿಸುತ್ತದೆ. ಅತ್ತಿತ್ತ ಹಾರಾಡುತ್ತಿದ್ದ ಮಹಾನ್ ಪರ್ವತಗಳು ಇಂದ್ರನ ಕೈಯ ವಜ್ರಾಯುಧದಿಂದ ಘಾತಿಗೊಂಡವು. ಹಾಗೆಂದು ವಜ್ರಾಯುಧವು ಗಾತ್ರದಲ್ಲಿ ಪರ್ವತಗಳಿಗೆ ಸಮನಿದ್ದವೇನು? ನಮ್ಮಲ್ಲಿ ಆತ್ಮಶಕ್ತಿ ತೇಜಸ್ಸು ಹೆಚ್ಚಿದಾಗ ತಾನಾಗಿಯೇ ಎದುರಾಳಿಯಲ್ಲಿ ತೇಜೋಭಿಭವ ಉಂಟಾಗುತ್ತದೆ. ಯಾರಲ್ಲಿ ತೇಜಸ್ಸು ವಿರಾಜಿಸುತ್ತದೋ ಅವನೇ ಬಲಶಾಲಿ. ದೊಡ್ಡ ಗಾತ್ರದಿಂದ ಪ್ರಯೋಜವೇನು?
ಹಸ್ತೀ ಸ್ಥೂಲತನುಃ ಸ ಚಾಂಕುಶವಶಃ ಕಿಂ ಹಸ್ತಿಮಾತ್ರೋಂಽಕುಶಃ।
ದೀಪೇ ಪ್ರಜ್ವಲಿತೇ ಪ್ರಣಶ್ಯತಿ ತಮಃ ಕಿಂ ದೀಪಮಾತ್ರೋ ತಮಃ।।
ವಜ್ರೇಣೈವ ಹತಾಃ ಪತಂತಿ ಗಿರಯಃ ಕಿಂ ವಜ್ರಮಾತ್ರೋ ಗಿರಿಃ।
ತೇಜೋ ಯಸ್ಯ ವಿರಾಜತೇ ಸ ಬಲವಾನ್ ಸ್ಥೂಲೇಷು ಕಃ ಪ್ರತ್ಯಯಃ।।
ಅನ್ವಯ ಅರ್ಥ:
ಹಸ್ತೀ (ಆನೆಯು)
ಸ್ಥೂಲತನುಃ(ಸ್ಥೂಲವಾದ್ದನ್ನು ಶರೀರವುಳ್ಳದ್ದು)
ಸಃ ಚ(ಅದೂ ಕೂಡಾ)
ಅಂಕುಶವಶಃ(ಅಂಕುಶದ ವಶದಲ್ಲಿದೆ)
ಅಂಕುಶಃ(ಅಂಕುಶವು)
ಹಸ್ತಿಮಾತ್ರಃ ಕಿಮ್?(ಆನೆಯ ಗಾತ್ರದ್ದೇನು?)
ದೀಪೇ ಪ್ರಜ್ವಲಿತೇ(ದೀಪ ಬೆಳಗಿದಾಗ)
ತಮಃ (ಕತ್ತಲೆಯು)
ಪ್ರಣಶ್ಯತಿ(ನಾಶವಾಗುತ್ತದೆ)
ತಮಃ(ಕತ್ತಲೆಯು)
ದೀಪಮಾತ್ರಃ ಕಿಮ್?(ದೀಪದಷ್ಟೇ ಗಾತ್ರದ್ದೇನು?)
ವಜ್ರೇಣ ಏವ(ವಜ್ರಾಯುಧದಿಂದಲೇ)
ಹತಾಃ (ಹೊಡೆಯಲ್ಪಟ್ಟ)
ಗಿರಯಃ (ಪರ್ವತಗಳು)
ಪತಂತಿ(ಉರುಳುತ್ತವೆ)
ಗಿರಿಃ(ಪರ್ವತವು)
ವಜ್ರಮಾತ್ರಃ(ವಜ್ರಾಯುಧದ ಗಾತ್ರದ್ದೇನು?)
ಯಸ್ಯ ತೇಜಃ(ಅಸ್ತಿ)(ಯಾರಲ್ಲಿ ತೇಜಸ್ಸು ಇದೆಯೋ) ಸಃ(ಅವನು)
ಬಲವಾನ್(ಶಕ್ತಿಶಾಲಿಯು)
ಸ್ಥೂಲೇಷು(ದಪ್ಪಗಿರುವವರಲ್ಲಿ)
ಕಃ ಪ್ರತ್ಯಯಃ (ಗುಣವೇನಿದೆ?)
ಭಾವಾರ್ಥ:
ಆತ್ಮಶಕ್ತಿ ಸಾಮರ್ಥ್ಯ ಇದ್ದರೆ ಗಾತ್ರದಿಂದ ಹೆಚ್ಚಿನ ಪ್ರಯೋಜನ ಏನೂ ಇಲ್ಲ. ಮಹಾನ್ ಗಾತ್ರದ ಆನೆಯನ್ನು ಹಿಡಿತಕ್ಕೆ ತರುವುದು ಪುಟ್ಟ ಅಂಕುಶ. ಆ ಅಂಕುಶವನ್ನು ಹಿಡಿದ ಮಾವುತನೂ ಆನೆಗೆ ಹೋಲಿಸಿದಾಗ ಪುಟ್ಟನೇ. ಕತ್ತಲು ಸುತ್ತಲೂ ಕವಿದಿದ್ದರೂ ಪುಟ್ಟ ದೀಪವು ಅದನ್ನು ಹೊಡೆದೋಡಿಸುತ್ತದೆ. ಅತ್ತಿತ್ತ ಹಾರಾಡುತ್ತಿದ್ದ ಮಹಾನ್ ಪರ್ವತಗಳು ಇಂದ್ರನ ಕೈಯ ವಜ್ರಾಯುಧದಿಂದ ಘಾತಿಗೊಂಡವು. ಹಾಗೆಂದು ವಜ್ರಾಯುಧವು ಗಾತ್ರದಲ್ಲಿ ಪರ್ವತಗಳಿಗೆ ಸಮನಿದ್ದವೇನು? ನಮ್ಮಲ್ಲಿ ಆತ್ಮಶಕ್ತಿ ತೇಜಸ್ಸು ಹೆಚ್ಚಿದಾಗ ತಾನಾಗಿಯೇ ಎದುರಾಳಿಯಲ್ಲಿ ತೇಜೋಭಿಭವ ಉಂಟಾಗುತ್ತದೆ. ಯಾರಲ್ಲಿ ತೇಜಸ್ಸು ವಿರಾಜಿಸುತ್ತದೋ ಅವನೇ ಬಲಶಾಲಿ. ದೊಡ್ಡ ಗಾತ್ರದಿಂದ ಪ್ರಯೋಜವೇನು?
No comments:
Post a Comment