ಸುಭಾಷಿತ - ೩೭
ಅಕೃತ್ವಾ ಪರಸಂತಾಪಮ್ ಅಗತ್ವಾ ಖಲನಮ್ರತಾಮ್।
ಅನುಸೃತ್ಯ ಸತಾಂ ಮಾರ್ಗಂ ಯತ್ಸ್ವಲ್ಪಮಪಿ ತದ್ಬಹು।।
ಅನ್ವಯಾರ್ಥ:
ಪರಸಂತಾಪಂ ಅಕೃತ್ವಾ(ಬೇರೆಯವರಿಗೆ ಸಂತಾಪವನ್ನುಂಟುಮಾಡದೆ)
ಖಲನಮ್ರತಾಮ್ ಅಗತ್ವಾ(ದುಷ್ಟಜನರೆದುರು ತಲೆಬಾಗದೆ) ಸತಾಂ ಮಾರ್ಗಂ ಅನುಸೃತ್ಯ (ಸಜ್ಜನರ ದಾರಿಯನ್ನು ಅನುಸರಿಸಿ)
ಯತ್ ಸ್ವಲ್ಪಂ ಅಪಿ (ಸ್ವಲ್ಪವೇ ಆದರೂ ಏನು ಸಂಪಾದಿಸುತ್ತೇವೆಯೋ)
ತತ್ (ಅದು) ಬಹು (ಅಗಾಧವಾದುದು)
ಭಾವಾರ್ಥ:
ಎಷ್ಟು ಸಂಪಾದಿಸಿದೆ ಎಂಬುದಕ್ಕಿಂತ ಹೇಗೆ ಸಂಪಾದಿಸಿದೆ ಎಂಬುದು ಮುಖ್ಯ. ಇತರರಿಗೆ ಅನ್ಯಾಯ ಮಾಡಿ, ದುಷ್ಟರೆದುರು ತಲೆಬಾಗಿ ಓಲೈಸಿ ಅವರೊಂದಿಗೆ ಸೇರಿ ಹೇರಳವಾಗಿ ಸಂಪಾದಿಸುವುದಕ್ಕಿಂತ ಸಜ್ಜನರ ಮಾರ್ಗವನ್ನೇ ಅನುಸರಿಸಿ ದುಡಿದು ಸ್ವಲ್ಪವೇ ಸಂಪಾದಿಸಿದರೂ ಅದು ಉತ್ಕೃಷ್ಟ ಮತ್ತು ಅಗಾಧವಾದ ಸಂಪಾದನೆ. ಸರ್ವಜ್ಞ ಹೇಳುವಂತೆ ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು ಭಂಗಬಟ್ಟುಂಬ ಬಿಸಿಯನ್ನಕಿಂತಲು ತಂಗುಳವೆ ಲೇಸು ಸರ್ವಜ್ಞ.
ಅಕೃತ್ವಾ ಪರಸಂತಾಪಮ್ ಅಗತ್ವಾ ಖಲನಮ್ರತಾಮ್।
ಅನುಸೃತ್ಯ ಸತಾಂ ಮಾರ್ಗಂ ಯತ್ಸ್ವಲ್ಪಮಪಿ ತದ್ಬಹು।।
ಅನ್ವಯಾರ್ಥ:
ಪರಸಂತಾಪಂ ಅಕೃತ್ವಾ(ಬೇರೆಯವರಿಗೆ ಸಂತಾಪವನ್ನುಂಟುಮಾಡದೆ)
ಖಲನಮ್ರತಾಮ್ ಅಗತ್ವಾ(ದುಷ್ಟಜನರೆದುರು ತಲೆಬಾಗದೆ) ಸತಾಂ ಮಾರ್ಗಂ ಅನುಸೃತ್ಯ (ಸಜ್ಜನರ ದಾರಿಯನ್ನು ಅನುಸರಿಸಿ)
ಯತ್ ಸ್ವಲ್ಪಂ ಅಪಿ (ಸ್ವಲ್ಪವೇ ಆದರೂ ಏನು ಸಂಪಾದಿಸುತ್ತೇವೆಯೋ)
ತತ್ (ಅದು) ಬಹು (ಅಗಾಧವಾದುದು)
ಭಾವಾರ್ಥ:
ಎಷ್ಟು ಸಂಪಾದಿಸಿದೆ ಎಂಬುದಕ್ಕಿಂತ ಹೇಗೆ ಸಂಪಾದಿಸಿದೆ ಎಂಬುದು ಮುಖ್ಯ. ಇತರರಿಗೆ ಅನ್ಯಾಯ ಮಾಡಿ, ದುಷ್ಟರೆದುರು ತಲೆಬಾಗಿ ಓಲೈಸಿ ಅವರೊಂದಿಗೆ ಸೇರಿ ಹೇರಳವಾಗಿ ಸಂಪಾದಿಸುವುದಕ್ಕಿಂತ ಸಜ್ಜನರ ಮಾರ್ಗವನ್ನೇ ಅನುಸರಿಸಿ ದುಡಿದು ಸ್ವಲ್ಪವೇ ಸಂಪಾದಿಸಿದರೂ ಅದು ಉತ್ಕೃಷ್ಟ ಮತ್ತು ಅಗಾಧವಾದ ಸಂಪಾದನೆ. ಸರ್ವಜ್ಞ ಹೇಳುವಂತೆ ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು ಭಂಗಬಟ್ಟುಂಬ ಬಿಸಿಯನ್ನಕಿಂತಲು ತಂಗುಳವೆ ಲೇಸು ಸರ್ವಜ್ಞ.
No comments:
Post a Comment