Monday 18 February 2019

ಸುಭಾಷಿತ ೩೬




 ಸಂತೋಷಾಮೃತತೃಪ್ತಾನಾಂ ಯತ್ಸುಖಂ ಶಾಂತಿರೇವ ಚ।   ಕುತಸ್ತದ್ಧನಲುಬ್ಧಾನಾಮಿತಶ್ಚೇತಶ್ಚ ಧಾವತಾಮ್॥



     ಅನ್ವಯ ಅರ್ಥ:



  ಸಂತೋಷಾಮೃತತೃಪ್ತಾನಾಂ (ಸಂತೋಷವೆಂಬ ಅಮೃತದಿಂದ  ತೃಪ್ತರಾದವರಿಗೆ)
 ಯತ್ ಸುಖಂ(ಯಾವ ಸುಖ)
 ಚ (ಮತ್ತು)
  ಶಾಂತಿಃ (ಶಾಂತಿಯು)
 (ಅಸ್ತಿ ಇರುತ್ತದೋ)
 ತತ್ (ಅದು)
  ಇತಃ ಚ ಇತಃ ಚ(ಅತ್ತಿತ್ತ)
 ಧಾವತಾಂ (ಓಡುತ್ತಿರುವ)
 ಧನಲುಬ್ಧಾನಾಂ (ಧನದಾಹಿಗಳಿಗೆ)
 ಕುತಃ(ಎಲ್ಲಿಂದ?)



ಭಾವಾರ್ಥ:

 ತೃಪ್ತಿ ಸಂತೋಷಕಾರಕ. ಆಸೆ ದುಃಖಮೂಲ. ತೃಪ್ತಿ ಇದ್ದಲ್ಲಿ ಸಂತೋಷವಿದೆ ಸುಖಶಾಂತಿನೆಮ್ಮದಿಯಿದೆ. ಇರುವುದು ಅಲ್ಪ ಇಲ್ಲದಿರುವುದು ಅನಂತ. ಒಂದು ಆಸೆ ಪೂರೈಸಿದಾಗ ಇನ್ನೊಂದು ಹುಟ್ಟಿಕೊಳ್ಳುತ್ತದೆ. ಅದೆಲ್ಲವೂ ಬೇಕು ಎಂದರೆ ಅದು ಅಸಾಧ್ಯ.

    ಇಲ್ಲದಿರುವುದರ ಬೆಂಬತ್ತಿ ಹೋದರೆ ಇರುವುದನ್ನು ಅನುಭವಿಸುವ ಯೋಗ ತಪ್ಪಿ ಹೋಗುತ್ತದೆ. ಹೊಸದು ಸಿಗಲಿಲ್ಲ ಇದ್ದದ್ದು ಉಳಿಯಲಿಲ್ಲ ಎಂಬ ಪರಿಸ್ಥಿತಿಯಲ್ಲಿ ಸುಖವೆಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಇದ್ದುದರಲ್ಲಿ ತೃಪ್ತಿಯಿಯಿಂದ ಸುಖಪಡುವವನಿಗೆ ಇಲ್ಲದುದರ ಚಿಂತೆಯಿಲ್ಲ. ಸುಖದ ಕಲ್ಪನೆಯಲ್ಲೇ ದುಃಖ ಅನುಭವಿಸುವ ಧನದಾಹಿಗೆ ಆ ಸುಖ ಎಲ್ಲಿಂದ ಬರಬೇಕು?

No comments:

Post a Comment