Wednesday 20 February 2019

   ಸುಭಾಷಿತ - ೪೨


ಅಕ್ಷರಾಣಿ ಪರೀಕ್ಷ್ಯಂತಾಮಂಬರಾಡಂಬರೇಣ ಕಿಮ್।ಶಂಭುರಂಬರಹೀನೋಪಿ ಸರ್ವಜ್ಞಃ ಕಿಂ ನ ಕಥ್ಯತೇ।।
 (ಅಪ್ಪಯ್ಯ ದೀಕ್ಷಿತರು)


ಅನ್ವಯಾರ್ಥ:

 ಅಕ್ಷರಾಣಿ(ಅಕ್ಷರಗಳನ್ನು/ವಿದ್ಯೆಯನ್ನು)   ಪರೀಕ್ಷ್ಯಂತಾಮ್(ಪರೀಕ್ಷಿಸಿ ನೋಡಬೇಕು,)   ಅಂಬರಾಡಂಬರೇಣ ಕಿಮ್?(ವಸ್ತ್ರಗಳ ಆಡಂಬರದಿಂದ ಏನು ಪ್ರಯೋಜನ?)
 ಶಂಭುಃ(ಶಿವನು)
 ಅಂಬರಹೀನಃ ಅಪಿ (ಬಟ್ಟೆ ಇಲ್ಲದ ದಿಗಂಬರನಾದರೂ)   ಸರ್ವಜ್ಞಃ ಇತಿ(ಸರ್ವಜ್ಞನೆದಂದು)
 ನ ಕಥ್ಯತೇ ಕಿಮ್(ಕರೆಯಲ್ಪಡುವುದಿಲ್ಲವೇ?)


ಭಾವಾರ್ಥ:

ಆಡಂಬರದ ವೇಷಭೂಷಣ, ಪಾಂಡಿತ್ಯ ಮೆರೆಯುವ ದೊಡ್ಡ ದೊಡ್ಡ ಪದಗಳನ್ನು ಬಳಸಿ ಮಾತನಾಡುವದು ಹೀಗೆ ಆಡಂಬರ ಮಾಡುವುದರಿಂದ ಏನು ಸುಖ? ಒಳಗಿನ ಪೊಳ್ಳುತನ ಒಂದಲ್ಲಾ ಒಂದು ದಿನ ಹೊರಬಿದ್ದೇ ಬೀಳುತ್ತದೆ. ನಿಜವಾದ ಪ್ರತಿಭೆಗೆ ಯಾವುದೇ ಪ್ರಚಾರ ಬೇಕಾಗಿಲ್ಲ. ದಶದಿಕ್ಕುಗಳೇ ಬಟ್ಟೆಯಾಗಿರುವ ಶಿವನು ಸರ್ವಜ್ಞಮೂರ್ತಿಯೆನಿಸಿಲ್ಲವೇ?

No comments:

Post a Comment