Friday 15 February 2019

ಸುಭಾಷಿತ ೩೦




ಪಠತೋ ನಾಸ್ತಿ ಮೂರ್ಖತ್ವಂ ಜಪತೋ ನಾಸ್ತಿ ಪಾತಕಮ್।ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ।।



ಅನ್ವಯ ಅರ್ಥ:



 ಪಠತಃ(ಓದುವವನಿಗೆ)
 ಮೂರ್ಖತ್ವಂ ನ ಅಸ್ತಿ (ಮೂರ್ಖತನವಿಲ್ಲ)   ಜಪತಃ(ಜಪಿಸುವವನಿಗೆ)
 ಪಾತಕಂ ನ ಅಸ್ತಿ(ಪಾಪವಿಲ್ಲ)
 ಮೌನಿನಃ (ಮೌನದಿಂದ ಇರುವವನಿಗೆ)
 ಕಲಹಃ ನ ಅಸ್ತಿ(ಜಗಳವಿಲ್ಲ)
 ಜಾಗ್ರತಃ ಚ(ಮತ್ತು ಎಚ್ಚರಿಕೆಯಿಂದ ಇರುವವನಿಗೆ) ಭಯಂ ನ ಅಸ್ತಿ(ಭಯವಿಲ್ಲ)


ಭಾವಾರ್ಥ:


ಸದಾ ಓದುತ್ತಾ ಇರುವುದರಿಂದ ಮೂರ್ಖತನ ದೂರವಾಗುತ್ತದೆ. ದೇವರನಾಮಜಪದಿಂದ ಪಾಪವು ನಾಶವಾಗುತ್ತದೆ. ಹೆಚ್ಚು ಮಾತನಾಡದೆ ಇರುವುದರಿಂದ ಜಗಳವು ಕಡಿಮೆಯಾಗುತ್ತದೆ. ಸದಾ ಎಚ್ಚರವಹಿಸಿ ಯೋಚಿಸಿ ಕಾರ್ಯವೆಸಗಿದರೆ ಭಯವೆಂಬುದಿಲ್ಲ.

No comments:

Post a Comment